Advertisement

SSLC ಕಡಿಮೆ ಅಂಕ: ಕುಂದಾಪುರ ಮೂಲದ ವಿದ್ಯಾರ್ಥಿ ಆತ್ಮಹತ್ಯೆ

11:33 PM May 19, 2024 | Team Udayavani |

ಗೌರಿಬಿದನೂರು: ಎಸೆಸೆಲ್ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ನೊಂದು, ನಗರದ ವಿನಾಯಕ ನಗರ ನಿವಾಸಿಯಾದ ಹೊಟೇಲ್‌ ಮಾಲಕ ಉದಯ್‌ ಅವರ ಪುತ್ರ ನಿಹಾರ್‌ (16) ಅವರು ರವಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Advertisement

ಮೂಲತಃ ಕುಂದಾಪುರ ನಿವಾಸಿಯಾಗಿದ್ದ ಉದಯ್‌ 20 ವರ್ಷಗಳಿಂದ ನಗರದಲ್ಲಿ ಹೊಟೇಲ್‌ ನಡೆಸುತ್ತಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು, ಎರಡನೆಯನಾಗಿದ್ದ ನಿಹಾರ್‌ ನಗರದ ವಿದ್ಯಾನಿಧಿ ಪಬ್ಲಿಕ್‌ ಶಾಲೆಯಲ್ಲಿ ಓದುತ್ತಿದ್ದ.

ಕಳೆದ ಶುಕ್ರವಾರ ತಾಯಿ ಮತ್ತು ಮಗ ಶಾಲೆಗೆ ತೆರಳಿ ಮರುಪರೀಕ್ಷೆ ಬಗ್ಗೆ ಮಾಹಿತಿ ಪಡೆದುಕೊಂಡು ಬಂದಿದ್ದರು. ಆದರೆ ರವಿವಾರ ಬೆಳಗ್ಗೆ ನಿಹಾರ್‌ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next