Advertisement

ಜಯನಗರದಲ್ಲಿ ಕಡಿಮೆ ಅಂತರದ ಸೋಲಾಗಿದೆ, ಯಾರನ್ನೂ ದೂರಲ್ಲ:ಬಿಎಸ್‌ವೈ

03:52 PM Jun 13, 2018 | |

ಬೆಂಗಳೂರು: ಜಯನಗರದಲ್ಲಿ ನಮಗೆ ಕಡಿಮೆ ಅಂತರದ ಸೋಲಾಗಿದೆ. ಸೋಲಿಗೆ ಯಾರನ್ನೂ ದೂರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. 

Advertisement

ಬುಧವಾರ ಫ‌ಲಿತಾಂಶ ಪ್ರಕಟವಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ವೈ ‘ ಮತ ನೀಡಿದ ಎಲ್ಲರಿಗೂ ನನ್ನ ಅಭಿನಂದನೆ. ಜನರ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ನಮ್ಮ ಕಾರ್ಯಕರ್ತರು ಹಾಗೂ ಮುಖಂಡರು ಶ್ರಮ ವಹಿಸಿದ್ದಾರೆ. ನಾವು ಕಡಿಮೆ ಅಂತರದಲ್ಲಿ ಸೋತಿರುವುದು ಬೇಸರ ತಂದಿದೆ’ ಎಂದರು. 

ಯಾವುದೇ ಪಾಲಿಕೆ ಸದಸ್ಯರಾಗಲಿ, ಮುಖಂಡರಾಗಲಿ ನಮ್ಮ ಅಭ್ಯರ್ಥಿಯ ವಿರುದ್ಧ ಕೆಲಸ ಮಾಡಿಲ್ಲ . ನಾವು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯ ವಿರುದ್ಧ ಸರಿಯಾದ ತಂತ್ರ ಬಳಸಬೇಕಿತ್ತು. ಕಳೆದ ಬಾರಿಗಿಂತ ನಾವು 7 ಸಾವಿರ ಹೆಚ್ಚು ಮತಗಳನ್ನು ಪಡೆದಿದ್ದೇವೆ ಎಂದರು. 

ಎಚ್‌ಡಿಕೆ ವಿರುದ್ಧ ಕಿಡಿ 
ವಿಧಾನಸೌಧದಲ್ಲಿ ಭ್ರಷ್ಟಾಚಾರ ಕಂಡಿದ್ದೇನೆ ಎಂದಿರುವ ಮುಖ್ಯಮಂತ್ರಿಳು ಅಧಿಕಾರ ಹೇಗೆ ನಡೆಸುತ್ತಾರೆ ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿ ಕಾರಿದರು. 

Advertisement

Udayavani is now on Telegram. Click here to join our channel and stay updated with the latest news.

Next