Advertisement

ಕಡಿಮೆ ಖರ್ಚಿನಲ್ಲೀಗ ಸಾವಯವ ಗಾರ್ಡನಿಂಗ್‌

12:13 AM Sep 21, 2019 | mahesh |

ರಾಸಾಯನಿಕ ಕೀಟನಾಶಕಗಳ ಬಳಕೆ ಇಂದು ಅಧಿಕವಾಗುತ್ತಿದೆ. ಗದ್ದೆ, ತೋಟ, ತರಕಾರಿಗಳಿಂದ ಹಿಡಿದು ಹೋದೋಟಗಳವರೆಗೆ ಎಲ್ಲ ಕಡೆಗಳಲ್ಲೂ ಗಿಡಗಳು ಉತ್ತಮವಾಗಿ ಬೆಳೆಯಲು ಹಾಗೂ ಬೇಗನೆ ಫ‌ಸಲು ನೀಡುವುದಕ್ಕಾಗಿ ಕೀಟನಾಶಕಗಳ ಬಳಕೆ ಮಾಡುತ್ತಾರೆ. ಇದರಿಂದ ಬೆಳೆ ಉತ್ತಮವಾಗಿ ಕೆಲವು ಸಮಯ ಲಭಿಸಬಹುದು. ಆದರೆ ಅದರಿಂದ ಮಣ್ಣಿಗೆ ಮಾತ್ರ ನಿರಂತರ ಹಾನಿಯುಂಟಾಗುತ್ತದೆ. ಮಣ್ಣಿನ ಫ‌ಲವತ್ತತೆ ನಷ್ಟವಾಗುತ್ತದೆ. ಆದರೆ ಸಾವಯವ ಕೃಷಿ ಮಾಡುವುದರಿಂದ ಮಣ್ಣಿಗೆ ಯಾವುದೇ ಹಾನಿ ಉಂಟಾಗುವುದಿಲ್ಲ. ಕಡಿಮೆ ಖರ್ಚಿನಲ್ಲಿ ಇದನ್ನು ಬಳಸಬಹುದು.

Advertisement

ಗಾರ್ಡನಿಂಗ್‌ ಮಾಡುವಾಗಲೂ ಸಾವಯವವನ್ನು ಆಯ್ದುಕೊಳ್ಳುವುದು ಉತ್ತಮ. ಹೂವಿನ ಗಿಡಗಳಿಗೆ ಯಾವುದೇ ರೀತಿಯಲ್ಲಿ ಹಾನಿಯುಂಟಾಗದೆ ಸುಂದರವಾಗಿ ಬೆಳೆಯಲು ಸಾವಯವ ಗೊಬ್ಬರಗಳು ಸಹಕಾರಿಯಾಗಿವೆ. ಈ ಗೊಬ್ಬರಗಳ ತಯಾರಿಕೆಗೆ ತುಂಬಾ ಶ್ರಮ ಪಡಬೇಕಾದ ಅಗತ್ಯವೇನಿಲ್ಲ. ಮನೆಯಲ್ಲಿರುವ ವಸ್ತುಗಳೇ ಸಾಕು.

ತರಗೆಲೆ ಅಥವಾ ಉದುರಿದ ಎಲೆಗಳೇ ಗೊಬ್ಬರ
ನಿಮ್ಮ ಉದ್ಯಾನವನದಲ್ಲಿ ಉದುರಿರುವ ಎಲೆಗಳನ್ನು ಹಾಗೇ ಇರಲು ಬಿಡಬೇಡಿ. ಅದನ್ನು ಗಿಡಗಳ ಬುಡಗಳಿಗೆ ಹಾಕಿ ಬಿಡಬೇಕು. ಅವುಗಳು ಅಲ್ಲೇ ಕೊಳೆತು ಗೊಬ್ಬರವಾಗಿ ಪರಿಣಮಿಸುತ್ತವೆ. ಅಥವಾ ಒಂದು ಹೊಂಡ ತೆಗೆದು ಅಲ್ಲಿ ತರಗೆಲೆಗಳ ಸಮೇತ ಕಸಕಡ್ಡಿಗಳನ್ನು ರಾಶಿ ಹಾಕುವುದರಿಂದ ಅಲ್ಲಿ ಗೊಬ್ಬರ ಉಂಟಾಗುತ್ತದೆ. ಅದನ್ನು ಮತ್ತೆ ಗಿಡಗಳ ಬುಡಕ್ಕೆ ಹಾಕಬಹುದು.

ದನದ ಸೆಗಣಿ ಹಾಗೂ ಬೂದಿ ಉತ್ತಮ ಗೊಬ್ಬರವೆಂದು ಪರಿಗಣಿಸಲ್ಪಡುತ್ತದೆ. ತಿಂಗಳಿಗೊಮ್ಮೆ ಇವುಗಳನ್ನು ಗಿಡಗಳಿಗೆ ಹಾಕಿದರೆ ಯಾವುದೇ ರಾಸಾಯನಿಕ ವಸ್ತುಗಳ ಅಗತ್ಯ ಕಂಡು ಬರುವುದಿಲ್ಲ. ಎರೆಹುಳಗಳಂತಹ ಸಣ್ಣ ಜೀವಿಗಳು ಮಣ್ಣಿನಲ್ಲಿ ಇದ್ದರೆ ಅವುಗಳನ್ನು ನಾಶ ಮಾಡಬೇಡಿ. ಮಣ್ಣಿನ ಫ‌ಲವತ್ತತೆಯನ್ನು ಹೆಚ್ಚಿಸುವಲ್ಲಿ ಇವುಗಳೂ ಸಹಕಾರಿ.

ಪ್ರತಿಯೊಂದು ಔಷಧಗಳನ್ನು ಗಿಡಗಳಿಗೆ ಸಿಂಪಡಿಸುವಾಗಲೂ ಎಚ್ಚರಿಕೆಯಿಂದಿರಿ. ಅತಿಯಾದ ಬಳಕೆ ಬೇಡ. ಪ್ರಮಾಣ ಹದವಾಗಿರಲಿ. ಗಿಡ ಸಣ್ಣದಾಗಿದ್ದು ಹಾಕುವ ಗೊಬ್ಬರಗಳ ಪ್ರಮಾಣ ಅಧಿಕವಾದರೆ ಕೆಲವೊಂದು ಸಂದರ್ಭದಲ್ಲಿ ಗಿಡಗಳು ಸಾಯುವ ಪರಿಸ್ಥಿತಿ ಉಂಟಾಗುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಮಾಡಿದರೆ ಕಡಿಮೆ ಖರ್ಚಿನಲ್ಲಿ ಸಾವಯವ ಗೊಬ್ಬರದಿಂದ ಉತ್ತಮ ಉದ್ಯಾನವನ ನಿರ್ಮಿಸಬಹುದು.

Advertisement

ಜೈವಿಕ ಕೀಟನಾಶಕ
ಗಿಡಗಳಿಗೆ ಹುಳು ಬರುವುದಕ್ಕೆ ಮನೆಯಲ್ಲೇ ಕೀಟನಾಶಕಗಳನ್ನು ತಯಾರಿಸಬಹುದು. ಕಹಿಬೇವಿನ ರಸವನ್ನು ಹೂವಿನ ಗಿಡಗಳ ಎಲೆಗಳಿಗೆ ಸಿಂಪಡಿಸಿದರೆ ಹುಳು ವಿನ ಕಾಟದಿಂದ ಮುಕ್ತಿ ಪಡೆಯ ಬಹುದು. ಕಾಂಡವನ್ನು ಅಗೆಯುವ ಹುಳುಗಳಿದ್ದರೆ ಬೇವಿನ ರಸವನ್ನು ಬುಡಗಳಿಗೂ ಹಾಕಬಹುದು.

-  ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

Advertisement

Udayavani is now on Telegram. Click here to join our channel and stay updated with the latest news.

Next