Advertisement

‘ಲವ್ ಯೂ ರಚ್ಚು’ದುರಂತ : ಆರೋಪಿಗಳು ನ್ಯಾಯಾಂಗ ಬಂಧನಕ್ಕೆ

12:54 PM Aug 10, 2021 | Team Udayavani |

ರಾಮನಗರ : ನಿನ್ನೆ(ಸೋಮವಾರ, ಆಗಸ್ಟ್ 9) ತಾಲೂಕಿನ ಬಿಡದಿ ಹೋಬಳಿ ಜೋಗನಪಾಳ್ಯದ ತೆಂಗಿನ ತೋಟದಲ್ಲಿ ಲವ್ ಯೂ ರಚ್ಚು ಸಿನಿಮಾ ಚಿತ್ರೀಕರಣ ವೇಳೆ ವಿದ್ಯತ್ ಪ್ರವಹಿಸಿ ಸಾಹಸ ಕಲಾವಿದ ವಿವೇಕ್ ಮೃತ ಪಟ್ಟ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಆರೋಪಿಗಳಿಗೆ  ಇಲ್ಲಿನ ಅಪರ ಹಿರಿಯ ಸಿವಿಲ್ ನ್ಯಾಯಾಲಯ14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

Advertisement

ಇದನ್ನೂ ಓದಿ : ಭೂ ಮಾಫಿಯಾ ಜೊತೆ ಪೊಲೀಸರು ಕೈಜೋಡಿಸುವುದನ್ನು ಸಹಿಸುವುದಿಲ್ಲ: ಸಿಎಂ ಬೊಮ್ಮಾಯಿ

ನಿರ್ದೇಶಕ ಶಂಕರ್, ಕ್ರೇನ್ ಆಪರೇಟರ್ ಮಹದೇವ್, ಸಾಹಸ ನಿರ್ದೇಶಕ ವಿನೋದ್ ಕುಮಾರ್ ಅವರ ವಿರುದ್ದ ಬಿಡದಿ ಪೊಲೀಸರು ಪ್ರಕರಣ ದಾಖಲಿಸಿ ನ್ಯಾಯಾಲಯದ ಮುಂದೆ ಇಂದು(ಮಂಗಳವಾರ, ಆಗಸ್ಟ್ 10) ಹಾಜರು ಪಡಿಸಿದ್ದರು.

ನ್ಯಾಯಾಧೀಶೆ ಅನುಪಮಲಕ್ಷ್ಮಿ ಈ ಆದೇಶ ಹೊರೆಡಿಸಿದ್ದಾರೆ. 24-08-2021 ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ.

ಇದನ್ನೂ ಓದಿ : ಕೆಜಿಎಫ್ ಅಡ್ಡಾಕ್ಕೆ ಬಂದೇ ಬಿಟ್ರು ಶೃತಿ-ಸುಧಾರಾಣಿ : ಅರೇ.. ಇವರದ್ಯಾವ ಪಾತ್ರ?

Advertisement
Advertisement

Udayavani is now on Telegram. Click here to join our channel and stay updated with the latest news.

Next