Advertisement

Bengaluru; ಠಾಣೆ ಮೆಟ್ಟಿಲೇರಿತು 70ರ ಅಜ್ಜ, 63ರ ಅಜ್ಜಿಯ ಪ್ರೇಮ ಪುರಾಣ!

11:27 PM Aug 21, 2023 | Team Udayavani |

ಬೆಂಗಳೂರು: ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಈಗ ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿ 63ರ ಹರೆಯದ ಹಲಸೂರು ನಿವಾಸಿ ದಯಾವಾಣಿ ಅವರು 70 ವರ್ಷದ ಲೋಕನಾಥನ್‌ ಎಂಬವರ ವಿರುದ್ಧ ಶಿವಾಜಿನಗರ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ!

Advertisement

ದೂರುದಾರೆ ಪತಿ ಹಾಗೂ ಲೋಕನಾಥನ್‌ ಪತ್ನಿ ಮೃತಪಟ್ಟಿದ್ದಾರೆ. ಐದು ವರ್ಷಗಳ ಹಿಂದೆ ಲೋಕನಾಥನ್‌ ತನ್ನ ಮಗನಿಗೆ ವಧು ಹುಡುಕುತ್ತಿದ್ದಾಗ ದಯಾಮಣಿಯ ಪರಿಚಯವಾಗಿತ್ತು. ಬಳಿಕ ಇಬ್ಬರೂ ಸಲುಗೆಯಿಂದಿದ್ದು, ಮೈಸೂರು, ದಾವಣಗೆರೆೆ, ಬೆಳಗಾವಿ ಮುಂತಾದೆಡೆ ಸುತ್ತಾಡಿದ್ದರು. ಆರಂಭದಲ್ಲಿ ಮದುವೆಯಾಗುವ ಭರವಸೆ ನೀಡಿ ಈಗ ನಿರಾಕರಿಸುತ್ತಿದ್ದಾರೆ ಹಾಗೂ ಕೊಲೆ ಬೆದರಿಕೆಯನ್ನೂ ಹಾಕುತ್ತಿದ್ದಾರೆ ಎಂದು ದಯಾಮಣಿ ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next