Advertisement

ಪ್ರೀತಿ, ವಿಶ್ವಾಸದ ಬದುಕು: ಬಿಷಪ್‌ ಕರೆ

09:34 AM May 02, 2018 | Harsha Rao |

ಮಂಗಳೂರು: ಕ್ರೈಸ್ತರು ಧಾರ್ಮಿಕವಾಗಿ ತಮ್ಮ ವಿಶ್ವಾಸವನ್ನು ಬಲಪಡಿಸುವ ಜತೆಗೆ ಸಾಮುದಾಯಿಕವಾಗಿ ಎಲ್ಲ ಧರ್ಮೀಯರ ಜತೆಗೆ ಸಹಕಾರ, ಪ್ರೀತಿ, ವಿಶ್ವಾಸದಿಂದ ಬಾಳುವೆ ನಡೆಸಬೇಕು; ತಾವು ಕ್ರೈಸ್ತರು ಎಂದು ಹೇಳಿಕೊಳ್ಳಲು ಯಾವುದೇ ಮುಜುಗರ – ಭಯ ಬೇಡ ಎಂದು ಮಂಗಳೂರು ಬಿಷಪ್‌ ರೈ| ರೆ| ಡಾ| ಅಲೋಶಿಯಸ್‌ ಪಾವ್‌É ಡಿ’ಸೋಜಾ ಹೇಳಿದರು. 

Advertisement

ಅವರು ಸೋಮವಾರ ಮಂಗಳೂರು ತಾಲೂಕಿನ ನೀರುಮಾರ್ಗ ಶ್ರಮಿಕ ಸಂತ ಜೋಸೆಫ್‌ ಚರ್ಚ್‌ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಮುಖ್ಯ ಅತಿಥಿಯಾಗಿದ್ದ ಕೋಲ್ಕತಾದ ಆರ್ಚ್‌ ಬಿಷಪ್‌ ನೀರುಮಾರ್ಗ ಮೂಲದ ರೆ| ಡಾ| ಥಾಮಸ್‌ ಡಿ’ಸೋಜಾ ಅವರು ಸುವರ್ಣ ಮಹೋತ್ಸವದ ಶುಭಾಶಯ ಸಲ್ಲಿಸಿದರು. ಅತಿಥಿಯಾಗಿದ್ದ ಮಂಗಳೂರು ಧರ್ಮಪ್ರಾಂತದ ಕಾರ್ಯದರ್ಶಿ ಎಂ.ಪಿ. ನೊರೋನ್ಹಾ ಅವರು, ಚರ್ಚ್‌ಗಳು ಕೇವಲ ಧರ್ಮ ಬೋಧನೆ ಮಾತ್ರ ಮಾಡುತ್ತಿಲ್ಲ; ಶಿಕ್ಷಣ, ಆರೋಗ್ಯ ಮತ್ತು ಇತರ ಸೇವೆಗಳ ಮೂಲಕ ರಾಷ್ಟ್ರ ನಿರ್ಮಾಣದ ಕೆಲಸ ಮಾಡುತ್ತಿವೆ ಎಂದರು. 

ಮಂಗಳೂರು ಧರ್ಮ ಪ್ರಾಂತದ ನಗರ ವಲಯದ ಮುಖ್ಯಸ್ಥ ಫಾ| ವಿಕ್ಟರ್‌ ಮಚಾದೊ (ಕುಲಶೇಖರ ಚರ್ಚ್‌) ಮತ್ತು ಹೋಲಿ ಕ್ರಾಸ್‌ ಧರ್ಮ ಭಗಿನಿಯರ ಸಂಸ್ಥೆಯ ಪ್ರಾಂತೀಯ ಮುಖ್ಯಸ್ಥರಾದ ಸಿ| ಫ್ಲೋರಿ ಡಿ’ಸೋಜಾ ಸುವರ್ಣ ಮಹೋತ್ಸವದ ಶುಭಾಶಯ ಸಲ್ಲಿಸಿದರು. 

ಲಾಂಛನ ಅನಾವರಣ, ಸಮ್ಮಾನ
ಸುವರ್ಣ ಮಹೋತ್ಸವದ ಲಾಂಛನವನ್ನು ಬಿಷಪ್‌ ಅಲೋಶಿಯಸ್‌ ಡಿ’ಸೋಜಾ ಅನಾವರಣ ಮಾಡಿದರು. ನೀರುಮಾರ್ಗ ಚರ್ಚ್‌ ಸ್ಥಾಪನೆಗೆ ನೆರವಾದ ವಾಮಂಜೂರು ಚರ್ಚ್‌ನ ಪರವಾಗಿ ಈಗಿನ ಧರ್ಮಗುರು ಫಾ| ಜೇಮ್ಸ್‌ ಡಿ’ಸೋಜಾ, ನೀರುಮಾರ್ಗ ಚರ್ಚ್‌ನಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ ಫಾ| ವಲೇರಿಯನ್‌ ಫ್ರಾÂಂಕ್‌, ಫಾ| ವಿಕ್ಟರ್‌ ಡಿ’ಸೋಜಾ, ಫಾ| ಗಾಡ್‌ಫಿÅà ಎ. ಸಲ್ದಾನಾ, ಹೋಲಿ ಕ್ರಾಸ್‌ ಕಾನ್ವೆಂಟ್‌ನ ಧರ್ಮ ಭಗಿನಿ ಸಿ| ಮೇರಿ ಜಾನ್‌ ಮೊಂತೇರೊ ಮತ್ತು ಸಿ| ನೀತಾ ಆಳ್ವ, 1968ರಲ್ಲಿ ಚರ್ಚ್‌ ಸ್ಥಾಪಿಸಲು ಜಮೀನು ಒದಗಿಸಿದ ಜಾನ್‌ ಪಡಿವಾಳ್‌ ಅವರ ಕುಟುಂಬಸ್ಥರ ಪರವಾಗಿ ಮಾರ್ಕ್‌ ರೊಡ್ರಿಗಸ್‌ ಅವರನ್ನು, ಚರ್ಚ್‌ನಲ್ಲಿ ಸೇವೆ ಸಲ್ಲಿಸಿದ ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು, ಗುರುಗಳ ಸಹಾಯಕರನ್ನು ಸಮ್ಮಾನಿಸಲಾಯಿತು. 

Advertisement

ಸುವರ್ಣ ಮಹೋತ್ಸವ ಸಮಿತಿಯ ಸಂಚಾಲಕ ಅರುಣ್‌ ಡಿ’ಸೋಜಾ ಸ್ವಾಗತಿಸಿದರು. ಚರ್ಚ್‌ನ ಧರ್ಮಗುರು ಫಾ| ಅನಿಲ್‌ ಡಿ’ಮೆಲ್ಲೊ ವಂದಿಸಿದರು.  ಉಪಾಧ್ಯಕ್ಷ ಪ್ರಕಾಶ್‌ ಪಿರೇರಾ, ಕಾರ್ಯದರ್ಶಿ ಜೆರಾಲ್ಡ್‌ ಲೋಬೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಸಾದ್‌ ವಾಸ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next