Advertisement

ಪ್ರೇಮಕವಿ

12:19 PM Feb 16, 2020 | keerthan |

ನಿನ್ನ ಅಪ್ಪಿಕೊಂಡ ಪ್ರತಿಘಳಿಗೆ

Advertisement

ಮನಸಿನಲ್ಲೊಂದು ಕವಿತೆ

ಜಾರಿಗೆ ತಂದು ಬಿಡುತ್ತೇನೆ

ಅದಕ್ಕೆ,

ನನ್ನೇಲ್ಲ ಉಸಿರು ಬಿಗಿಹಿಡಿದು

Advertisement

ಪ್ರೀತಿಸುತ್ತೇನೆ

ಮತ್ತೆ ನನ್ನದೇ ಅಂತ

ಘೋಷಿಸುತ್ತೇನೆ.

ಅಪ್ಪುಗೆ ಸಡಿಲಿಸಿದರೆ

ಜಂಗುಳಿಯಲಿ ಕಳೆದ

ಮಗುವಿನ ಭಾವ.!

 

ನನ್ನಿಷ್ಟು ಹಾಳು ಮಾಡಿದ್ದು

ನಿನ್ನ ಓರೆನೋಟವಷ್ಟೇ ಅಲ್ಲ!

ಅದರಲ್ಲಿ ನಿನ್ನ ಮೌನ, ಮಾತು

ಸೌಂದರ್ಯಗುಚ್ಛ, ನೀಳಕೇಶನಿಧಿ,

ಅವರೆಬಳ್ಳಿಸೊಂಟ’

ಎಲ್ಲವುಗಳ ವ್ಯವಸ್ಥಿತ

ತಂತ್ರಗಾರಿಕೆ ಅಡಗಿದೆ!

 

ಪ್ಯಾರಿಸುತ, (ಪೊಲೀಸ್ ಇಲಾಖೆ)

Advertisement

Udayavani is now on Telegram. Click here to join our channel and stay updated with the latest news.

Next