Advertisement

ಮಳೆಗೆ ಮಾವು, ಟೊಮೆಟೋ ನಷ್ಟ

02:30 PM May 01, 2020 | mahesh |

ಟೇಕಲ್‌: ಹೋಬಳಿಯಲ್ಲಿ ಬುಧವಾರ ಬೆಳಗಿನ ಜಾವ 4 ರಿಂದ 10 ಗಂಟೆವರೆಗೂ ಬಿದ್ದ ಗುಡುಗು ಸಹಿತ ಆಲಿಕಲ್ಲು ಮಳೆಯಿಂದಾಗಿ ಮಾವಿನ ತೋಟ, ಟೊಮೆಟೋ , ಚಿಕ್ಕಡಿ ಬೆಳೆ ಸೇರಿ 25 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ನಷ್ಟವಾಗಿ ಅಂದಾಜು 5 ಲಕ್ಷ ರೂ. ಗೂ ಹೆಚ್ಚು ನಷ್ಟವಾಗಿರುವುದು ಕಂಡು
ಬಂದಿದೆ.

Advertisement

ಕೆಂಪಸಂದ್ರ ಗ್ರಾಮದಲ್ಲಿ ಟೊಮೆಟೋ ಬೆಳೆ 5 ಎಕರೆ, ಯಜ್ಞಾವದಾನಿ ಗ್ರಾಮದಲ್ಲಿ ಚಿಕ್ಕಡಿ 1.20 ಎಕರೆ ಮತ್ತು ಟೊಮೆಟೋ, ಬಸಾಪುರ ಗ್ರಾಮದಲ್ಲಿ ಹೂಕೋಸು 1 ಎಕರೆ ಮತ್ತು ಟೊಮೆಟೋ ತೋಟ 7 ಎಕರೆ ಹಾಗೂ ಕರಡುಗುರ್ಕಿ ಗ್ರಾಮದ ಬಳಿ ಮಾವು 8 ಎಕರೆ ಪ್ರದೇಶದಲ್ಲಿದ್ದು, ಮಳೆಯಿಂದ ನೆಲಕಚ್ಚಿದೆ. ನಷ್ಟವಾಗಿರುವ ಅಂದಾಜು ಮೌಲ್ಯ 5 ಲಕ್ಷ ರೂ. ಇರಬಹುದೆಂದು ತಿಳಿದು ಬಂದಿದೆ. ಇನ್ನೂ ಕೆಲವು ಗ್ರಾಮಗಳಲ್ಲಿ ಮಳೆ ಗಾಳಿಗೆ ತೋಟಗಾರಿಕಾ ಬೆಳೆಗಳು ನಷ್ಟವಾಗಿವೆ. ಈ ಬಗ್ಗೆ ಮಾಹಿತಿ ಪಡೆಯುತ್ತಿರುವುದಾಗಿ ಮಾಲೂರು ತೋಟಗಾರಿಕಾ ಇಲಾಖೆಯ ನಿರ್ದೇಶಕಿ ಶಿಲ್ಪಶ್ರೀ ತಿಳಿಸಿದ್ದಾರೆ.

ಇಲಾಖೆ ಸಿಬ್ಬಂದಿ ರೈತರ ತೋಟಗಳಿಗೆ ಭೇಟಿ ನೀಡಿ, ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತಿದ್ದು, ಇನ್ನೂ ಮಾಹಿತಿ ಬರಬೇಕಿದೆ ಎಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next