Advertisement

ಲಾರಿ ಹರಿದು ಪಾದಯಾತ್ರೆ ತೆರಳುತ್ತಿದ್ದ ಭಕ್ತರಿಬ್ಬರ ಸಾವು

09:17 AM Oct 02, 2017 | |

 ಹುಮ್ನಾಬಾದ್‌: ಇಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ  ಯಮರೂಪಿ ಲಾರಿಯೊಂದು ಹರಿದು ದೇವಾಲಯಕ್ಕೆ ಪಾತಾಯಾತ್ರೆ ತೆರಳುತ್ತಿದ್ದ ತೆಲಂಗಾಣ ಮೂಲದ ಮಹಿಳೆಯರು ದಾರುಣವಾಗಿ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. 

Advertisement

ಮೃತರು ಲಕ್ಷ್ಮೀ ವೆಂಕಟಗೌಡ,ಗೌರಮ್ಮ ಸಂಗಮೇಶ್‌ ಎನ್ನುವವರಾಗಿದ್ದು, ತೆಲಂಗಾಣ ಮೂಲದ ವಿಕಾರಾಬಾದ್‌ನಿಂದ ಅಂಬಾ ಭವಾನಿ ದೇವಿಯ ದರ್ಶನಕ್ಕೆಂದು ಪಾದಯಾತ್ರೆ ಹೊರಟಿದ್ದರು ಎಂದು ತಿಳಿದು ಬಂದಿದೆ. 

ಅಪಘಾತವಾದ  ಬಳಿಕ ಚಾಲಕ ಲಾರಿ ಸಮೇತ ಪರಾರಿಯಾಗಿದ್ದಾನೆ.ಹುಮ್ನಾಬಾದ್‌ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಗಾಯಾಳುಗಳಿಗೆ ಹುಮ್ನಾಬಾದ್‌ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next