Advertisement

Siddapura: ಸ್ಕೂಟರ್‌ಗೆ ಲಾರಿ ಢಿಕ್ಕಿ; ಸವಾರ ಸಾವು

09:37 PM Aug 03, 2024 | Team Udayavani |

ಸಿದ್ದಾಪುರ: ಹಾಲಾಡಿ ಸಮೀಪದ ಹೈಕಾಡಿ ಬಳಿಯ ಕಾಸಾಡಿ ರಸ್ತೆ ತಿರುವಿನಲ್ಲಿ ಸ್ಕೂಟರ್‌ಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಸಂಭವಿಸಿದೆ.

Advertisement

ಬೆಳ್ವೆ ಗ್ರಾಮದ ಗುಮ್ಮೋಲ ಕೆಂಜಿಮನೆ ನಿವಾಸಿ ನಾಗರಾಜ (41) ಮೃತರು. ಢಿಕ್ಕಿಯಿಂದಾಗಿ ರಸ್ತೆಗೆ ಬಿದ್ದ ಅವರ ತಲೆ ಮೇಲೆ ಲಾರಿಯ ಹಿಂಬದಿಯ ಚಕ್ರ ಹರಿದ ಪರಿಣಾಮ, ತಲೆ ಒಡೆದು ಸ್ಥಳದಲ್ಲಿಯೇ ಮೃತ ಪಟ್ಟರು.

ನಾಗರಾಜ ಅವರು ಬೆಳ್ವೆ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿಗೆ ಹುಚ್ಚುನಾಯಿ ಕಚ್ಚಿದ ಕಾರಣ ಆಸ್ಪತ್ರೆಗೆ ದಾಖಲಿಸಿ ಮನೆಗೆ ಬಂದ ಅವರು ಬಟ್ಟೆಯನ್ನು ತೆಗೆದುಕೊಂಡು ಮರಳಿ ಕುಂದಾಪುರಕ್ಕೆ ತೆರಳುವ ವೇಳೆ ಈ ಘಟನೆ ಸಂಭವಿಸಿದೆ.

ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ವಾರಸುದಾರರಿಗೆ ಮೃತ ದೇಹವನ್ನು ಹಸ್ತಾಂತರಿಸಲಾಯಿತು. ಶಂಕರನಾರಾಯಣ ಪೊಲೀಸ‌ರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next