Advertisement

Kundagalla: ಲಾರಿ ಡಿಕ್ಕಿ ಹೊಡೆದು 33 ಕುರಿಗಳ ಸಾವು… ಕುರಿ ಮಾಂಸಕ್ಕಾಗಿ ಮುಗಿಬಿದ್ದ ಜನ

02:40 PM Aug 02, 2024 | Team Udayavani |

ಕಂದಗಲ್ಲ: ಸೊಲ್ಲಾಪುರ – ಮಂಗಳೂರು ರಾಷ್ಟ್ರೀಯ ಹೆದ್ದಾರಿ 50 ರ ಕಿರಿಯಾಡ್ ಹೋಟೆಲ್ ಸಮೀಪದಲ್ಲಿ ಲಾರಿಯೊಂದು ಡಿಕ್ಕಿ ಹೊಡೆದು 33 ಕುರಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದರೆ ಕುರಿಗಾಹಿಯ ಕಾಲಿಗೆ ಗಂಭೀರ ಗಾಯಗೊಂಡಿರುವ ಘಟನೆ ಶುಕ್ರವಾರದಂದು ಮುಂಜಾನೆ ಎರಡು ಗಂಟೆಯ ಸುಮಾರಿಗೆ ನಡೆದಿದೆ.

Advertisement

ಮುಂಜಾನೆ ಹೆದ್ದಾರಿಯಲ್ಲಿ ಕುರಿಗಳು ಸಾಗುತ್ತಿರುವುದು ಕಾಣದೇ ಈ ದುರಂತ ನಡೆದಿದೆ. ಸುಮಾರು 30 ಕ್ಕೂ ಹೆಚ್ಚು ಕುರಿಗಳು ಗಾಯಗೊಂಡಿವೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೊಡಕೇಲ್ ಗ್ರಾಮದ ಕುರಿಗಾಹಿ ರಾಯಪ್ಪ ಕಾಲು ಮುರಿದು ಕೊಂಡು ಬಾಗಲಕೋಟೆ ಸರಕಾರಿ ಆಸ್ಪತ್ರೆಗೆ ಸೇರಿದ್ದಾನೆ.

ಇಳಕಲ್ಲ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್ ಐ ಮಲ್ಲು ಸತ್ತಿಗೌಡರ ಅವರು ಲಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಕುರಿ ಮಾಂಸಕ್ಕೆ ಜನರ ಗದ್ದಲ : ಅಪಘಾತದಲ್ಲಿ ಸಾವಿಗೀಡಾದ ಕುರಿಗಳ ಮಾಂಸಕ್ಕಾಗಿ ಹಲವಾರು ಜನರು ಸ್ಥಳದಲ್ಲಿ ಸೇರಿ ಅದನ್ನು ತೆಗೆದುಕೊಂಡು ಹೋಗುತ್ತಿದ್ದ ದೃಶ್ಯಗಳು ಅಲ್ಲಿ ಕಂಡು ಬಂದವು.

ಇದನ್ನೂ ಓದಿ: INDvsSL ಏಕದಿನ ಸರಣಿ ಆರಂಭ: ಅವಕಾಶ ಪಡೆದ ಕನ್ನಡಿಗ; ಟಾಸ್ ಗೆದ್ದ ಲಂಕಾ

Advertisement
Advertisement

Udayavani is now on Telegram. Click here to join our channel and stay updated with the latest news.

Next