Advertisement

ಲಾರಿಗೆ ಕಾರು ಡಿಕ್ಕಿ ಪ್ರಕರಣ; ಚಿಕಿತ್ಸೆ ಫಲಿಸದೆ ಮದುಮಗಳು ಸಾವು

01:46 PM May 23, 2017 | Team Udayavani |

ಕಲಬುರಗಿ: ನಿಂತಿದ್ದ ಲಾರಿಗೆ ಮದುವೆ ದಿಬ್ಬಣದ ಕಾರು ಡಿಕ್ಕಿ ಹೊಡೆದಿದ್ದ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮದುಮಗಳು
ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ. 

Advertisement

ಜೇವರ್ಗಿ ತಾಲೂಕಿನ ಮಂದೇವಾಲಾ ಎಂಬಲ್ಲಿ ಮೇ 21ರಂದು ಮದುವೆ ದಿಬ್ಬಣದ ಕಾರು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ
ಮೂವರು ಸಾವನ್ನಪ್ಪಿದ್ದರು. ಭೂಮಿಕಾ ಎಂಬ 5 ವರ್ಷದ ಮಗು ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲೇ ಸಾವನ್ನಪ್ಪಿತ್ತು.  ಮದುಮಗಳಾದ ಜ್ಯೋತಿ
ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಆದರೆ ಚಿಕಿತ್ಸೆ ಫಲಕಾರಿಯಾಗದೆ ಮದುಮಗಳು ಜ್ಯೋತಿ ಸಾವನ್ನಪ್ಪುವ ಮೂಲಕ ಮೃತರ ಸಂಖ್ಯೆ 5ಕ್ಕೆ ಏರಿದಂತಾಗಿದೆ. ನೇಲೋಗಿ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next