Advertisement

ಅರ್ತಿಲ: ಲಾರಿಗಳು ಢಿಕ್ಕಿ; ಸಂಚಾರ ಅಸ್ತವ್ಯಸ್ತ 

11:58 AM Jun 24, 2018 | Team Udayavani |

ಮಡಂತ್ಯಾರು: ಮಂಗಳೂರು -ಧರ್ಮಸ್ಥಳ ರಾ.ಹೆ.ಯ ಬೆಳ್ತಂಗಡಿ ತಾಲೂಕಿನ ಸೋಣಂದೂರು ಗ್ರಾಮದ ಅರ್ತಿಲ ಸಮೀಪ ಶನಿವಾರ ಬೆಳಗ್ಗೆ ಲಾರಿಗಳು ಮುಖಾಮುಖೀ ಢಿಕ್ಕಿ ಸಂಭವಿಸಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಘಟನೆಯಿಂದಾಗಿ ಲಾರಿಗಳೆರಡೂ ಜಖಂಗೊಂಡು ರಸ್ತೆ ಮಧ್ಯೆ ಇದ್ದ ಕಾರಣ ಸುಮಾರು 3 ಗಂಟೆಗೂ ಹೆಚ್ಚು ಸಮಯ ರಸ್ತೆ ಬ್ಲಾಕ್‌ ಆಗಿತ್ತು. ವಾಹನಗಳೆಲ್ಲ ರಸ್ತೆಯಲ್ಲೇ ಸುಮಾರು 3 ಕಿ.ಮೀ. ವರೆಗೂ ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದವು. ಇದರಿಂದಾಗಿ ಸಾರ್ವಜನಿಕರು ಪರದಾಡುವಂತಾಗಿತ್ತು.

Advertisement

ಬೈಕ್‌ ಸವಾರರು ಸಿಕ್ಕ ಜಾಗದಲ್ಲಿ ನುಸುಳಿಕೊಂಡು ಹೋದರೆ, ಘನ ವಾಹನಗಳು ಹಿಂದಕ್ಕೂ ಬರಲಾಗದೆ, ಮುಂದೆಯೂ ಹೋಗಲಾರದೆ ಲಾರಿಗಳ ತೆರವು ಆಗುವವರೆಗೆ ರಸ್ತೆಯಲ್ಲೇ ನಿಲ್ಲುವಂತಾಯಿತು. ಪುಂಜಾಲಕಟ್ಟೆ ಪೊಲೀಸ್‌ ಠಾಣೆಯ ಠಾಣಾಧಿಕಾರಿ ಸತೀಶ್‌ ಬಲ್ಲಾಳ್‌, ಎಎಸ್‌ಐ ಲಕ್ಷ್ಮಣ್‌, ಆಸೀಫ್‌ ಮತ್ತು ಸಿಬಂದಿ  ಸ್ಥಳಕ್ಕೆ ಆಗಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next