Advertisement

ಹನುಮಂತ ಮುಸಲ್ಮಾನ!

06:20 AM Dec 21, 2018 | |

ಲಕ್ನೋ: ಇತ್ತೀಚೆಗೆ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಅವರು ಹನುಮಂತ ದಲಿತ ಎಂದಿದ್ದರು. ಆನಂತರ ಹನುಮಂತನನ್ನು ಆದಿವಾಸಿ ಎಂದೂ, ಜೈನ ಧರ್ಮೀಯ ಎಂದೂ ಕೆಲವರು ಹೇಳಿದ್ದರು. ಈಗ, ಉತ್ತರ ಪ್ರದೇಶದ ಶಾಸಕ ಬುಕ್ಕಲ್‌ ನವಾಬ್‌ ಅವರು ಹನುಮಂತ ಒಬ್ಬ ಮುಸಲ್ಮಾನ ಎಂದಿದ್ದಾರೆ! ಇತ್ತೀಚೆಗಷ್ಟೇ ಸಮಾಜವಾದಿ ಪಕ್ಷಕ್ಕೆ ಗುಡ್‌ಬೈ ಹೇಳಿ ಬಿಜೆಪಿ ಸೇರಿರುವ ವಿಧಾನ ಪರಿಷತ್‌ ಸದಸ್ಯ ನವಾಬ್‌, “”ಹನುಮಂತ‌ ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದ್ದು, ಆತ ಮುಸಲ್ಮಾನನೇ” ಎಂದಿದ್ದಾರೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next