Advertisement

Hubli; ಒಂದು ಕೋಮಿನವರು ನಿತ್ಯ ಮೈಕ್ ಹಾಕಿ ನಮಾಜ್ ಮಾಡಬಹುದು, ಆದರೆ..: ಪ್ರಹ್ಲಾದ ಜೋಶಿ

02:59 PM Apr 07, 2024 | Team Udayavani |

ಹುಬ್ಬಳ್ಳಿ: ಒಂದು ಕೋಮಿನವರು ನಿತ್ಯ ಮೈಕ್ ಹಾಕಿ ನಮಾಜ್ ಮಾಡಬಹುದು, ಆದರೆ, ಅಂಗಡಿಯಲ್ಲಿ ಹನುಮಾನ ಚಾಲೀಸ್ ಹಾಕಿದವರ ಮೇಲೆ ಕೇಸ್ ಹಾಕುತ್ತಾರೆ ಎಂದರೆ ಸಿಎಂ, ಡಿಸಿಎಂ ರಾಜ್ಯವನ್ನು ಪಾಕಿಸ್ತಾನ ಮಾಡಲು ಮುಂದಾಗಿದ್ದರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನುಮಾನ ಚಾಲೀಸ್ ಪಠಣ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ನಡೆ ಖಂಡನೀಯ. ಇವರೇನು ಕರ್ನಾಟಕ ಆಳುತ್ತಿದ್ದಾರೋ, ಇಸ್ಲಾಮಿಕ್ ರಾಷ್ಟವನ್ನು ಆಳುತ್ತಿದ್ದರೋ. ಕಾಂಗ್ರೆಸ್ ತುಷ್ಟೀಕರಣ ಪರಾಕಾಷ್ಠೆ ತಲುಪಿದ್ದು, ರಾಜ್ಯದ ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಹನುಮಾನ ಚಾಲೀಸ್ ಪಠಣ ಅಂಗಡಿಯಾತನ ಮೇಲಿನ ಎಫ್ ಐಆರ್‌ ಕೈಬಿಡಬೇಕು ಎಂದು ಜೋಶಿ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next