Advertisement

ರೈಲಿನಲ್ಲಿ ಲೂಟಿ: ಸಚಿವ ಸುರೇಶ್‌ ಪ್ರಭುಗೆ ಟ್ವೀಟ್‌

07:10 AM Aug 08, 2017 | Team Udayavani |

ಉಡುಪಿ: ರೈಲಿನಲ್ಲಿ ದಂಪತಿಗೆ ಅಮಲು ಪದಾರ್ಥ ನೀಡಿ ಸುಮಾರು 4 ಲ.ರೂ. ಮೌಲ್ಯದ ನಗ, ನಗದು ದೋಚಿ ಪರಾರಿಯಾದ ಪ್ರಕರಣ ಸಂಬಂಧ ರೈಲ್ವೇ ಸಚಿವ ಸುರೇಶ್‌ ಪ್ರಭು ಅವರಿಗೆ ಟ್ವೀಟ್‌ ಮೂಲಕ ದೂರು ನೀಡಿದ್ದು, ತತ್‌ಕ್ಷಣ ಸಂಬಂಧಪಟ್ಟವರಿಗೆ ಕ್ರಮ ಕೈಗೊಳ್ಳಲು ತಿಳಿಸುವುದಾಗಿ ರೀ ಟ್ವೀಟ್‌ ಬಂದಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

Advertisement

ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿರುವ ವಂಚನೆಗೊಳಗಾದ ಗಣೇಶ್‌ ಶೆಟ್ಟಿ (61) ಇನ್ನೂ ಅರೆ ಪ್ರಜ್ಞಾವಸ್ಥೆಯಲ್ಲಿದ್ದು, ಮಾತನಾಡುವ ಸ್ಥಿತಿಯಲ್ಲಿಲ್ಲ. ಪತ್ನಿ ರತ್ನಾ ಶೆಟ್ಟಿ ಅವರಿಗೆ ಸ್ವಲ್ಪ ಮಟ್ಟಿಗಿನ ಪ್ರಜ್ಞೆ ಬಂದಿದೆ ಎಂದು ತಿಳಿದು ಬಂದಿದೆ.  ಸ್ಲಿàಪರ್‌ ಕೋಚ್‌ನ 49- 50ನೇ ಸೀಟಿನಲ್ಲಿದ್ದ ನಮ್ಮನ್ನು ಮುಸ್ಲಿಂ ಕುಟುಂಬವೊಂದು ಸೀಟು ಕೇಳಿದ್ದು, ನಾವು 11-12ನೇ ಸೀಟಿನಲ್ಲಿ ಕುಳಿತಿದ್ದಾಗ ಅಲ್ಲಿದ್ದ 3-4 ಜನರ ತಂಡ ಮೊದಲು ಸೌತೆಕಾಯಿ ಕೊಟ್ಟಾಗ ಬೇಡವೆಂದಿದ್ದೆವು.

ಆನಂತರ ಹೊರಗಿನಿಂದ ತಂದ ಟೊಮೋಟೊ ಸೂಪ್‌ನ್ನು ಬೇಡವೆಂದರೂ ಒತ್ತಾಯಪೂರ್ವಕವಾಗಿ ಕುಡಿಯಲು ಕೊಟಿದ್ದರು. . ಸೂಪ್‌ ಕುಡಿದ ಬಳಿಕ ಏನಾಯಿತೆಂದು ಗೊತ್ತಿಲ್ಲ.  ಸೀಟು ಬದಲಿಸಿದ್ದರಿಂದ ಸೂಪ್‌ವರೆಗಿನ ಎಲ್ಲ ಘಟನೆಗಳ ಹಿಂದೆ ವ್ಯವಸ್ಥಿತ ಷಡ್ಯಂತ್ರವಿರಬಹುದು ಎನ್ನುವುದಾಗಿ ರತ್ನಾ ಅನುಮಾನ ವ್ಯಕ್ತಪಡಿಸಿದ್ದಾರೆ.  ಥಾಣೆಯಲ್ಲಿ ನೆಲೆಸಿರುವ, ಮೂಲತಃ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಮಡ್ಮನೆ- ಪಡುಮನೆ ನಿವಾಸಿ, ಸಂಜೀವ ಶೆಟ್ಟಿ (61) ಹಾಗೂ ಅವರ ಪತ್ನಿ ರತ್ನಾ ಶೆಟ್ಟಿ (56) ಥಾಣೆಯಿಂದ ಉಡುಪಿಗೆ ಪ್ರಯಾಣಿಸುತ್ತಿದ್ದಾಗ ಶನಿವಾರ ರಾತ್ರಿಯಿಂದ ರವಿವಾರ ಬೆಳಗ್ಗಿನ ಅವಧಿಯಲ್ಲಿ ಕೊಂಕಣ ರೈಲು ಮಾರ್ಗದಲ್ಲಿ ಈ ಕೃತ್ಯ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next