Advertisement
ಅಲ್ಲದೆ ಎಫ್ಐಆರ್ನಲ್ಲಿ ಹೆಸರಿರುವ ರೈತ ಮುಖಂಡರ ವಿರುದ್ಧ ಲುಕೌಟ್ ನೋಟಿಸ್ ಜಾರಿ ಮಾಡಿದ್ದಾರೆ. ತಮ್ಮ ಪಾಸ್ಪೋರ್ಟ್ಗಳನ್ನು ಸರೆಂಡರ್ ಮಾಡುವಂತೆ ಅವರಿಗೆ ಸೂಚಿಸಲಾಗಿದೆ.
Related Articles
Advertisement
ರೈತ ಮುಖಂಡರ ವಿರುದ್ಧ ದೀಪ್ ಕಿಡಿ: ಕೆಂಪುಕೋಟೆಯಲ್ಲಿ ಸಿಕ್ಖ್ ಧ್ವಜ ಹಾರಿಸಿದ ದೀಪ್ ಸಿಧುವನ್ನು “ಆರೆಸ್ಸೆಸ್ ಮತ್ತು ಬಿಜೆಪಿ ಏಜೆಂಟ್’ ಎಂದು ಕರೆದಿರುವ ರೈತ ಸಂಘಟನೆಗಳ ಮುಖಂಡರ ವಿರುದ್ಧ ಸಿಧು ಕಿಡಿಕಾರಿದ್ದಾರೆ. “ಬಿಜೆಪಿ ಅಥವಾ ಆರೆಸ್ಸೆಸ್ನವನಾಗಿದ್ದರೆ ನಾನು ಸಿಕ್ಖ್ ಧ್ವಜವನ್ನು ಏಕೆ ಹಾರಿಸುತ್ತಿದ್ದೆ’ ಎಂದು ಹೇಳಿದ್ದಾರೆ. ನನ್ನ ವಿರುದ್ಧ ಸುಖಾಸುಮ್ಮನೆ ದ್ವೇಷ ಸಾಧಿಸಲಾಗುತ್ತಿದೆ. ನಾನು ಕೆಂಪುಕೋಟೆ ತಲುಪುವಷ್ಟರಲ್ಲಿ ಅಲ್ಲಿ ಸಾಕಷ್ಟು ಜನ ಸೇರಿಯಾಗಿತ್ತು. ಆದರೆ ಒಬ್ಬ ರೈತ ಮುಖಂಡನೂ ಅಲ್ಲಿರಲಿಲ್ಲ. ಪ್ರತಿಭಟನಾರ್ಥವಾಗಿ ನಾವು ಧ್ವಜ ಹಾರಿಸಿದೆವು. ಅಲ್ಲಿನ ಬೇರಾವ ವಸ್ತುವಿಗೂ ಹಾನಿ ಮಾಡಿಲ್ಲ ಎಂದೂ ದೀಪ್ ಸಿಘು ಸ್ಪಷ್ಟನೆ ನೀಡಿದ್ದಾರೆ.
ಇಂದು ಸಂಜೆವರೆಗೂ ಇಂಟರ್ನೆಟ್ ಇಲ್ಲಇಂಟರ್ನೆಟ್ ಸಂಪರ್ಕ ಕಡಿತವನ್ನು ಶುಕ್ರವಾರ ಸಂಜೆ 5ರ ವರೆಗೂ ವಿಸ್ತರಿಸಿ ಗುರುವಾರ ಹರಿಯಾಣ ಸರಕಾರ ಆದೇಶ ಹೊರಡಿಸಿದೆ. ಮಂಗಳವಾರದ ಹಿಂಸಾಚಾರದ ಬಳಿಕ ಸೋನಿಪತ್, ಝಾಜ್ಜರ್ ಮತ್ತು ಪಲ್ವಾಲ್ ಜಿಲ್ಲೆಗಳಲ್ಲಿ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿರುವ ಕಾರಣ ಅದನ್ನು ವಿಸ್ತರಿಸಿದ್ದೇವೆ ಎಂದು ಸರಕಾರ ಹೇಳಿದೆ.