Advertisement

Lokayuktha raid: ಮುದ್ದೇಬಿಹಾಳ: ಪಿಡಿಓ,ಇಂಜಿನೀಯರ್ ಲೋಕಾಯುಕ್ತ ಬಲೆಗೆ

03:08 PM Oct 07, 2023 | Kavyashree |

ಮುದ್ದೇಬಿಹಾಳ: ಗ್ರಾ.ಪಂ. ಪಿಡಿಓ ಹಾಗೂ ಇಂಜಿನಿಯರ್ ಲಂಚ ಪಡೆಯುವಾಗ ವಿಜಯಪುರ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ ಹಣದ ಸಮೇತ ಇಬ್ಬರನ್ನು ಬಂಧಿಸಿದ ಘಟನೆ ಆ.7ರ ಶನಿವಾರ ನಡೆದಿದೆ.

Advertisement

ಉದ್ಯೋಗ ಖಾತ್ರಿ ಕಾಮಗಾರಿಯಡಿ ನಿರ್ಮಿಸಿದ ಗ್ರಾ.ಪಂ. ಕಾಂಪೌಂಡ್‌ ಕಾಮಗಾರಿಯ ಹಣ ಬಿಡುಗಡೆಗೆ ಲಂಚ ಕೇಳಿದ್ದ ತಂಗಡಗಿ ಗ್ರಾ.ಪಂ. ಪಿಡಿಓ ಬಸವರಾಜ ತಾಳಿಕೋಟಿ, ಇಂಜಿನಿಯರ್ ಪ್ರಸನ್ನಕುಮಾರ ಶೆಟ್ಟರ್ ಅವರು 30 ಸಾವಿರ ರೂ. ಲಂಚ ಕೇಳಿದ್ದರು.

ಶನಿವಾರ ತಾಪಂ ಕಚೇರಿಯ ಉದ್ಯೋಗ ಖಾತ್ರಿ ವಿಭಾಗದ ಕೊಠಡಿಯಲ್ಲಿ ದೂರುದಾರರಿಂದ ಲಂಚದ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ. ವಿಚಾರಣೆಯ ನಂತರ ನಗದು ಸಮೇತ ಇಬ್ಬರನ್ನು ಲೋಕಾಯುಕ್ತ ಪೊಲೀಸರು ಮುಂದಿನ ಕಾನೂನು ಕ್ರಮಕ್ಕೆ ಸಿದ್ದತೆ ನಡೆಸಿದ್ದಾರೆ.

ಲೋಕಾಯುಕ್ತ ಎಸ್ಪಿ ಹನುಮಂತರಾಯಪ್ಪ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಇನ್ಸ್ ಪೆಕ್ಟರಗಳಾದ ಆನಂದ ಠಕ್ಕನವರ್, ಆನಂದ ಡೋಣಿ, ಸಿಬ್ಬಂದಿಗಳಾದ ಸಂತೋಷ ಅಮರಖೇಡ, ಎಸ್.ಎಸ್.ಮುಂಜೆ, ಐ.ಎಸ್.ಕನ್ನೂರ, ಎ.ಜಿ.ಪಡಶೆಟ್ಟಿ, ಎ.ಎಚ್.ಗೋಲಗೇರಿ, ಎ.ಎ.ಮುಲ್ಲಾ, ಎಂ.ಎ.ಸಲಗೊಂಡ ದಾಳಿಯಲ್ಲಿದ್ದರು. ಸ್ಥಳೀಯ ಪೊಲೀಸರು ನೆರವು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next