Advertisement

Lokayuktha raid: ಕ್ಯಾಶುಟೆಕ್ ಯೋಜನಾ ನಿರ್ದೇಶಕ ಪಟ್ಟೇದ್ ಮನೆ ಮೇಲೆ ಲೋಕಾ ದಾಳಿ

09:02 AM Oct 30, 2023 | Team Udayavani |

ರಾಯಚೂರು: ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಆರೋಪದಡಿ ಕ್ಯಾಶುಟೆಕ್ ಸಂಸ್ಥೆಯ ಯೋಜನಾ ನಿರ್ದೇಶಕ ಶರಣಬಸಪ್ಪ ಪಟ್ಟೇದ್ ಮನೆ ಹಾಗೂ ಕಚೇರಿಯ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆಸಲಾಗಿದೆ.

Advertisement

ನಗರದ ಐಡಿಎಸ್ ಎಂಟಿ ಲೇಔಟನ್ ಗಂಗಾಪರಮೇಶ್ವರಿ ಕಾಲೋನಿಯಲ್ಲಿನ ಮನೆ, ಶಕ್ತಿನಗರದ ಕ್ಯಾಶುಟೆಕ್ ಕಚೇರಿ, ಅವರ ಸಂಬಂಧಿಕರ ಮನೆ ಹಾಗೂ ಅವರ ಸ್ವಗ್ರಾಮ ಲಿಂಗಸೂಗುರಿನ ಚಿಕ್ಕಹೆಸರೂರು ಮನೆ ಸೇರಿ ನಾಲ್ಕು ಕಡೆ ದಾಳಿ ನಡೆಸಲಾಗಿದೆ.

ದೇವಸೂಗೂರಿನ ರಾಘವೇಂದ್ರ ಕಾಲನಿಯಲ್ಲಿ ಪಟ್ಟೇದ್ ಅವರ ಸಹೋದರಿ ಮಕ್ಕಳ ಮನೆ ಮೇಲೂ ದಾಳಿ ನಡೆಸಲಾಗಿದೆ. ಅಕ್ಕನ ಮಕ್ಕಳ ಹೆಸರಲ್ಲಿ ಬೇನಾಮಿ ಆಸ್ತಿ ಮಾಡಿರುವ ಆರೋಪ ಕೇಳಿ ಬಂದಿದ್ದು, ಲೋಕಾಯುಕ್ತ ಎಸ್ಪಿ ಡಾ. ರಾಮ್ ಎಲ್‌. ಅರಸಿದ್ದಿ ನೇತೃತ್ವದಲ್ಲಿ ದಾಳಿ ನಡೆದಿದೆ.

ಅಗತ್ಯ ದಾಖಲೆ ಕಲೆ ಹಾಕುತ್ತಿದೆ. ಲಿಂಗಸುಗೂರಿನ ಚಿಕ್ಕಹೆಸರೂರಿನಲ್ಲಿ ಜಮೀನು ಸೇರಿ ಆಸ್ತಿಗಳ ಶೋಧ ನಡೆಸಲಾಗುತ್ತಿದೆ. ಜಿಲ್ಲಾಡಳಿತ ಬಹುತೇಕ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಕ್ಯಾಶುಟೆಕ್ ಸಂಸ್ಥೆಗೆ ವಹಿಸಲಾಗುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next