Advertisement

ಬೆಳ್ತಂಗಡಿ ತಾಲೂಕು ಕಚೇರಿಗೆ ಲೋಕಾಯುಕ್ತ ಎಸ್‌ಪಿ ಭೇಟಿ

09:14 AM Jan 18, 2019 | |

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಕಚೇರಿ ಸಿಬಂದಿಯ ಕಾರ್ಯವೈಖರಿ ಹಾಗೂ ಕಡತಗಳ ಪರಿಶೀಲನೆ ಕುರಿತು ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ)ಗಳ ತಂಡ ಗುರುವಾರ ತಾಲೂಕು ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

Advertisement

ತಾಲೂಕು ಕಚೇರಿಗೆ ಲೋಕಾಯುಕ್ತ ಎಸ್‌ಪಿ ಕೆ.ಎನ್‌. ಮಾದಯ್ಯ ಅವರ ಸಾಮಾನ್ಯ ಭೇಟಿಯಾಗಿದ್ದು, ಆ ಸಂದರ್ಭದಲ್ಲಿ ಲೋಕಾಯುಕ್ತಕ್ಕೆ ಬಂದ ದೂರುಗಳ ಕುರಿತೂ ಸಿಬಂದಿಯನ್ನು ವಿಚಾರಣೆ ನಡೆಸಿದರು. ಅಕ್ರಮ-ಸಕ್ರಮ ಅರ್ಜಿ ನೀಡುವುದಕ್ಕೆ ಆಗಮಿಸಿದ ಸಾರ್ವ ಜನಿಕರಿಂದ ಅಭಿಪ್ರಾಯ ಪಡೆದರು.

ತಹಶೀಲ್ದಾರ್‌ ಅವರು ಬೇರೆ ಕಾರ್ಯಗಳ ಕುರಿತು ಬೆಳ್ತಂಗಡಿಯಲ್ಲಿ ಲಭ್ಯರಿಲ್ಲದ ಹಿನ್ನೆಲೆಯಲ್ಲಿ ಕಚೇರಿಯ ಇತರ ಸಿಬಂದಿಯೊಂದಿಗೆ ಮಾತುಕತೆ ನಡೆಸಿದರು. ಸಾರ್ವಜನಿಕರಿಗೆ ಉತ್ತಮ ಸೇವೆ ಹಾಗೂ ದೂರುಗಳ ಕುರಿತು ಕ್ರಮಕೈಗೊಳ್ಳುವಂತೆ ಸೂಚಿಸಿದರು. ಲೋಕಾಯುಕ್ತ ಪೊಲೀಸ್‌ ನಿರೀಕ್ಷಕಿ ಭಾರತಿ ಹಾಗೂ ಸಿಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next