Advertisement
ವಿಶೇಷವಾಗಿ ಆಡಳಿತಾರೂಢ ಕಾಂಗ್ರೆಸ್ಗೆ ವಿಧಾನಸಭೆಯಲ್ಲಿ ಹೊಂದಿರುವ ಸಂಖ್ಯಾಬಲದ (137) ಆಧಾರದ ಮೇಲೆ 11ರಲ್ಲಿ 7 ಸ್ಥಾನಗಳು ಸುಲಭ ವಾಗಿ ಲಭ್ಯವಾಗಲಿವೆ. ಹೀಗಾಗಿ ವಿಧಾನ ಪರಿಷತ್ತಿನ ಸ್ಥಾನದ ಮೇಲೆ ಹಾಲಿ ಸಚಿವ ಎನ್.ಎಸ್.ಬೋಸರಾಜ್ ಹಾಗೂ ಹಾಲಿ ಸದಸ್ಯರಾಗಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು ಸಹಿತ 70 ಮಂದಿ ಆಕಾಂಕ್ಷಿಗಳಿದ್ದಾರೆ. ಈ ಸಂಬಂಧ ಕೆಪಿಸಿಸಿ ಸಂಭನೀಯರ ಪಟ್ಟಿ ಸಿದ್ಧಪಡಿಸಿ ಈಗಾಗಲೇ ಎಐಸಿಸಿಗೆ ಕಳುಹಿಸಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಆಕಾಂಕ್ಷಿಗಳ ದಂಡು ಹೊಸದಿಲ್ಲಿಯಲ್ಲಿ ಬೀಡು ಬಿಟ್ಟಿದ್ದು, ಲಾಬಿ ಆರಂಭವಾಗಿದೆ.
Related Articles
Advertisement
ನಾಮಪತ್ರ ಸಲ್ಲಿಕೆಗೆ ಜೂ. 3 ಕೊನೆಯ ದಿನವಾಗಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಹೊಸದಿಲ್ಲಿಯಲ್ಲಿ ಮೇ 28ಕ್ಕೆ ಸಭೆ ನಿಗದಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಅಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೇ 27 ಇಲ್ಲವೇ 28ರಂದು ಹೊಸದಿಲ್ಲಿಗೆ ಪ್ರಯಾಣ ಬೆಳೆಸುವ ಸಾಧ್ಯತೆಗಳಿವೆ. ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುಜೇìವಾಲ ಮೇ 26ರಂದು ಬೆಂಗಳೂರಿಗೆ ಆಗಮಿಸಿ ಈ ಸಂಬಂಧ ಸಭೆ ನಡೆಸುವ ನಿರೀಕ್ಷೆ ಇತ್ತು. ಆದರೆ ಈಗ ಹೊಸದಿಲ್ಲಿಯಲ್ಲೇ ಸಭೆ ನಿಗದಿ ಆಗಿರುವುದರಿಂದ ಆಕಾಂಕ್ಷಿಗಳು ಹೊಸದಿಲ್ಲಿಯತ್ತ ಪ್ರಯಾಣ ಬೆಳೆಸಿದ್ದಾರೆ.
ರಾಹುಲ್ ಸೂಚನೆ ಏನು?:
ಮೇಲ್ಮನೆ ಚುನಾವಣೆಯಲ್ಲಿ ಕಾರ್ಯಕರ್ತರಿಗೆ ಅವಕಾಶ ಕೊಡಬೇಕು, ಈಗಾಗಲೇ ಅವಕಾಶ ದೊರೆತವರಿಗೆ ಮತ್ತೂಮ್ಮೆ ಅವಕಾಶ ಕೊಡುವ ಬದಲಿಗೆ ಹೊಸಬರಿಗೆ ಅವಕಾಶ ಕಲ್ಪಿಸಬೇಕು ಹಾಗೂ ವಿಧಾನ ಸಭೆ ಅಥವಾ ಮೇಲ್ಮನೆಯಲ್ಲಿ ಪ್ರಾತಿನಿಧ್ಯವೇ ಇಲ್ಲದ ಸಮಾಜಗಳಿಗೆ ಅವಕಾಶ ಕೊಡಬೇಕೆಂದು ರಾಹುಲ್ ಗಾಂಧಿ ಸೂಚಿಸಿದ್ದಾರೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಚರ್ಚೆ ಆಗುತ್ತಿರುವುದರಿಂದ ಈ ಬಾರಿ ಹೊಸ ಮುಖಗಳಿಗೆ ಅವಕಾಶ ಸಿಗಬಹುದೆಂಬ ನಿರೀಕ್ಷೆ ಹೆಚ್ಚಿದೆ.
ಜತೆಗೆ ಅಧಿಕಾರ ಅನುಭವಿಸುತ್ತಿರುವ ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷರು, ಉಪಾಧ್ಯಕ್ಷರಿಗೂ ಅವಕಾಶ ಕೊಡಬಾರದೆಂಬ ಕೂಗು ಕೂಡ ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ. ಮೇಲ್ಮನೆ ಚುನಾವಣೆ ಬಂದಾಗಲೂ ಅವರ ಹೆಸರುಗಳು ಬರುತ್ತವೆ, ನಿಗಮ, ಮಂಡಳಿಗಳ ನೇಮಕಾತಿಯಲ್ಲಿಯೂ ಅವರೇ ಇರುತ್ತಾರೆ. ಹೀಗಾದರೆ ಹೊಸಬರಿಗೆ ಅವಕಾಶ ಸಿಗುವುದಿಲ್ಲ. ಈ ಸಲ ಅದಕ್ಕೆ ಅವಕಾಶ ಕೊಡಬಾರದೆಂಬ ಒತ್ತಡವೂ ಇದೆ.
ಯಾರ್ಯಾರು ಆಕಾಂಕ್ಷಿಗಳು?:
ಹಾಲಿ ಸದಸ್ಯರು:
ಎನ್.ಎಸ್. ಬೋಸರಾಜು (ಸಣ್ಣ ನೀರಾವರಿ ಸಚಿವರು)
ಕೆ. ಗೋವಿಂದ ರಾಜು- ಸಿಎಂ ರಾಜಕೀಯ ಕಾರ್ಯದರ್ಶಿ
ಮಾಜಿ ಸಚಿವರು: ಡಾ| ಬಿ.ಎಲ್. ಶಂಕರ್, ಎಚ್.ಎಂ. ರೇವಣ್ಣ, ಆರ್. ಶಂಕರ್, ರಾಣಿ ಸತೀಶ್, ಕೆ. ಶಿವಮೂರ್ತಿ
ಮಾಜಿ ಶಾಸಕರು: ಡಾ| ಯತೀಂದ್ರ, ಡಿ.ಆರ್. ಪಾಟೀಲ್, ನಂಜಯ್ಯಮಠ
ಮಾಜಿ ಸದಸ್ಯರು: ವಿ.ಆರ್. ಸುದರ್ಶನ್, ಆರ್.ವಿ. ವೆಂಕಟೇಶ್, ಎಂ.ಸಿ. ವೇಣುಗೋಪಾಲ್, ಪಿ.ಆರ್. ರಮೇಶ್, ವಿ.ಎಸ್. ಉಗ್ರಪ್ಪ, ಜಲಜಾ ನಾಯಕ್, ಮಲ್ಲಾಜಮ್ಮ, ಎಂ. ನಾರಾಯಣಸ್ವಾಮಿ, ಐವನ್ ಡಿ’ಸೋಜಾ, ಧರ್ಮಸೇನ.
ಕೆಪಿಸಿಸಿ ಪದಾಧಿಕಾರಿಗಳು: ವಸಂತಕುಮಾರ್, ಡಾ| ಎಲ್. ಹನುಮಂತಯ್ಯ, ವಿನಯ್ ಕಾರ್ತಿಕ್, ವಿಜಯ್ ಮುಳುಗುಂದ್, ರಘುನಂದನ್ ರಾಮಣ್ಣ, ಕೆ.ಎಂ. ಮಂಜುನಾಥ ಗೌಡ, ಮದನ್ ಪಟೇಲ್, ಡಾ| ಸಿ.ಎಸ್. ದ್ವಾರಕನಾಥ್, ಎಸ್.ಎ. ಹುಸೇನ್, ರಾಮಚಂದ್ರಪ್ಪ, ಜಿ.ಎ. ಬಾವಾ, ಎಂ. ವೆಂಕಟೇಶ್, ಡಾ| ಆನಂದ್ಕುಮಾರ್, ಎ.ಎಸ್. ಜಯಸಿಂಹ, ಭವ್ಯಾ ನರಸಿಂಹಮೂರ್ತಿ, ಕುಸುಮಾ ಹನುಮಂತರಾಯಪ್ಪ, ಐಶ್ವರ್ಯಾ ಮಹದೇವ್, ವೀಣಾ ಕಾಶಪ್ಪನವರ್, ಡಾ| ಆರತಿ ಕೃಷ್ಣ, ಬಿ.ವಿ. ಶ್ರೀನಿವಾಸ್, ಪುಷ್ಪಾ ಅಮರ್ನಾಥ್.
ಬಸವನಗೌಡ ಬಾದರ್ಲಿ, ಸದಾನಂದ ದಂಗಣ್ಣನವರ್, ಮುರಳೀಧರ ಹಾಲಪ್ಪ, ಓಬೇದುಲ್ಲಾ ಷರೀಪ್, ಸಯ್ಯದ್ ಅಹ್ಮದ್, ಷಫಿವುಲ್ಲಾ, ಮಂಜುಳ ನಾಯ್ಡು, ರತ್ನಪ್ರಭಾ, ಕಾಂತನಾಯಕ್.
ಪಕ್ಷಕ್ಕಾಗಿ ಕೆಲಸ ಮಾಡಿದ ಬಹಳಷ್ಟು
ಜನರಿದ್ದಾರೆ. ಅವರಿಗೆಲ್ಲ ಅವಕಾಶ ಸಿಗಬೇಕು. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮೈಸೂರು, ಮಂಗಳೂರು ಹೀಗೆ ಪ್ರಾಂತ ವಾರು ಅವಕಾಶ ಕೊಡಬೇಕು. ಪರಿಷತ್ ಸದಸ್ಯತ್ವ ಬರೀ ಬೆಂಗಳೂರಿಗೆ ಸೀಮಿತ ಆಗಬಾರದು.–ಸತೀಶ್ ಜಾರಕಿಹೊಳಿ, ಲೋಕೋಪಯೋಗಿ ಸಚಿವ
ಚುನಾವಣೆ ಸಂಬಂಧ ನನ್ನನ್ನೂ ಹಲವರು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಈ ಬಗ್ಗೆ ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರ ಬಳಿ ಮಾತನಾಡುತ್ತೇನೆ. ಏಳು ಸ್ಥಾನಕ್ಕೆ 70 ಆಕಾಂಕ್ಷಿಗಳಿದ್ದಾರೆ. ನಮ್ಮ ಪಕ್ಷವೇ ಆಡಳಿತದಲ್ಲಿ ಇರುವುದರಿಂದ ಎಲ್ಲರಿಗೂ ಆಕಾಂಕ್ಷೆ ಸಹಜ. ಆ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇವೆ.–ಡಾ| ಪರಮೇಶ್ವರ್, ಗೃಹ ಸಚಿವ