Advertisement

ಟೀಸಿ ನೀಡಲು ಲಂಚ ಸ್ವೀಕರಿಸಿದ ಪ್ರಾಂಶುಪಾಲ ಲೋಕಾಯುಕ್ತ ಬಲೆಗ

01:17 PM Jun 01, 2023 | Team Udayavani |

ಬೆಂಗಳೂರು: ಪರೀಕ್ಷೆಯ ಫಲಿತಾಂಶ ತಡೆಹಿಡಿದು ವರ್ಗಾವಣಾ ಪ್ರಮಾಣ ಪತ್ರ (ಟೀಸಿ) ನೀಡಲು 9ನೇ ತರಗತಿಯ ವಿದ್ಯಾರ್ಥಿಯ ಪಾಲಕರಿಗೆ 5 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟ ಪ್ರಾಂಶುಪಾಲ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

Advertisement

ರಾಜಾಜಿನಗರದ ಬಸ ವೇಶ್ವರ ಪ್ರೌಢಶಾಲೆಯ ಪ್ರಾಂಶುಪಾಲ ವಿ.ನಾರಾ ಯಣ ಬಂಧಿತ ಆರೋಪಿ. ರಾಜಾಜಿನಗರದ ಬಸವೇಶ್ವರ ಬಾಲಕರ ಅನುದಾನಿತ ಪ್ರೌಢಶಾಲೆಯಲ್ಲಿ 9 ತರಗತಿಯ ವಿದ್ಯಾರ್ಥಿಯ ಪರೀಕ್ಷೆಯ ಫಲಿತಾಂಶ ತಡೆ ಹಿಡಿದಿದ್ದರು. ಆದರೆ, ಟಿ.ಸಿ. ನೀಡಲು ವಿದ್ಯಾರ್ಥಿಯ ಸಮ್ಮುಖದಲ್ಲಿ ಅವರ ಪಾಲಕರಿಗೆ 5 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಲಂಚ ನೀಡಲು ಇಚ್ಛಿಸದ ವಿದ್ಯಾರ್ಥಿಯ ಪಾಲಕರು ನಾರಾಯಣ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಬುಧವಾರ ಶಾಲೆಯ ಆವರಣದಲ್ಲಿ ನಾರಾಯಣ 5 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಲಂಚದ ಹಣ ಜಪ್ತಿ ಮಾಡಿ ಬಂಧಿಸಿದೆ

Advertisement

Udayavani is now on Telegram. Click here to join our channel and stay updated with the latest news.

Next