Advertisement

ಮೆಗಾ ಲೋಕ ಅದಾಲತ್‌: 8,479 ಪ್ರಕರಣ ಇತ್ಯರ್ಥ

12:19 AM Aug 15, 2021 | Team Udayavani |

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ 42 ವಿವಿಧ ನ್ಯಾಯಾಲಯಗಳಲ್ಲಿ ಮತ್ತು ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ವಿವಿಧ ನ್ಯಾಯಾಲಯಗಳಲ್ಲಿ ಶನಿವಾರ ನಡೆದ ಮೆಗಾ ಲೋಕ ಅದಾಲತ್‌ನಲ್ಲಿ ಒಟ್ಟು 8,479 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.

Advertisement

ದ.ಕ. ಜಿಲ್ಲೆಯಲ್ಲಿ ಒಟ್ಟು 11,160 ಪ್ರಕರಣಗಳ ಪೈಕಿ 5,235 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ. 308 ಅಪಘಾತ ಪ್ರಕರಣಗಳಲ್ಲಿ 6,55,80,559 ರೂ. ಪರಿಹಾರ ಘೋಷಿಸಲಾಯಿತು. 132 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. 985 ಮಂದಿ ವೀಡಿಯೋ ಕಾನ್ಫರೆನ್ಸ್‌ ಮೂಲಕ ಸಂಧಾನದಲ್ಲಿ ಪಾಲ್ಗೊಂಡಿದ್ದರು.

ಸಿವಿಲ್‌ ಪ್ರಕರಣವೊಂದರಲ್ಲಿ ಮೂರು ಬಾರಿ ಅಪೀಲು ಹೋದ 1998ರ ಪ್ರಕರಣವೊಂದನ್ನು ಕೂಡ ಇತ್ಯರ್ಥಪಡಿಸಲಾಗಿದೆ. 200 ಚೆಕ್‌ಬೌನ್ಸ್‌ ಪ್ರಕರಣಗಳಲ್ಲಿ ಒಟ್ಟು 1,83,74,202 ರೂ. ಪರಿಹಾರ ಘೋಷಿಸಲಾಗಿದೆ.

ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮುರಲೀಧರ ಪೈ ಬಿ. ಅವರ ನೇತೃತ್ವದಲ್ಲಿ ಅದಾಲತ್‌ ನಡೆಯಿತು. ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪೃಥ್ವಿರಾಜ್‌ ವರ್ಣೇಕರ್‌ ಉಪಸ್ಥಿತರಿದ್ದರು.

ಉಡುಪಿ: 8.11 ಕೋ.ರೂ. ಪರಿಹಾರ :

Advertisement

ಉಡುಪಿ: ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ನ್ಯಾಯಾಲಯಗಳಲ್ಲಿ ನಡೆದ ಮೆಗಾ ಲೋಕ್‌ ಅದಾಲತ್‌ನಲ್ಲಿ 3,244 ಪ್ರಕರಣಗಳನ್ನು (ರಾಜಿಯಾಗಬಲ್ಲ ಅಪರಾಧಿಕ ಪ್ರಕರಣ – 54, ಚೆಕ್‌ ಅಮಾನ್ಯ ಪ್ರಕರಣ-134, ಬ್ಯಾಂಕ್‌ / ಹಣ ವಸೂಲಾತಿ ಪ್ರಕರಣ – 22, ಎಂ.ವಿ.ಸಿ. ಪ್ರಕರಣ-155, ಕಾರ್ಮಿಕ ವಿವಾದ-2 ಎಂಎಂಆರ್‌ಡಿ ಆ್ಯಕ್ಟ್ ಪ್ರಕರಣ-21, ವೈವಾಹಿಕ ಪ್ರಕರಣ-3, ಭೂಸ್ವಾಧೀನ ಪ್ರಕರಣ-1, ಸಿವಿಲ್‌  ಪ್ರಕರಣ-158, ಇತರ ಕ್ರಿಮಿನಲ್‌ ಪ್ರಕರಣ-2,515 ಹಾಗೂ ವ್ಯಾಜ್ಯ ಪೂರ್ವ ದಾವೆ-179) ರಾಜಿ ಮುಖಾಂತರ ಇತ್ಯರ್ಥಪಡಿಸಿ 8,11,35,240 ರೂ. ಪರಿಹಾರ ಮೊತ್ತವನ್ನು ಘೋಷಿಸಲಾಯಿತು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next