Advertisement

Lok Sabha Elections; ಕರ್ನಾಟಕದಲ್ಲಿ ಪ್ರಧಾನಿ ಮೋದಿ ಆಟ ನಡೆಯಲ್ಲ: ಶಿವಾನಂದ ಪಾಟೀಲ್‌

05:55 PM Apr 03, 2024 | Team Udayavani |

ಬಾಗಲಕೋಟೆ: ಇಡೀ ದೇಶದಲ್ಲೇ ಕರ್ನಾಟಕ ಒಂದು ವಿಭಿನ್ನ ರಾಜ್ಯ. ಹೊಸ ಇತಿಹಾಸ ಸೃಷ್ಟಿ ಮಾಡುವ ಜನ ಇಲ್ಲಿದ್ದಾರೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆಟ ನಡೆಯಲ್ಲ. ಇಡೀ ದೇಶಕ್ಕೆ ಕರ್ನಾಟಕ ವಿಭಿನ್ನ ಫಲಿತಾಂಶ ನೀಡಲಿದೆ ಎಂದು ಸಕ್ಕರೆ ಹಾಗೂ ಜವಳಿ ಸಚಿವ ಶಿವಾನಂದ ಪಾಟೀಲ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಹಿಟ್ಲರ್‌ ಆಡಳಿತವಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಮನಸ್ಸು ಗೆದ್ದು ಮತ ಪಡೆಯಬೇಕು. ಯಾವುದೋ ಭಯ ಅಥವಾ ಒತ್ತಡದಿಂದ ಮತ ಪಡೆಯುತ್ತೇನೆ ಎಂದರೆ ಅದಕ್ಕೆ ಜನರೇ ಉತ್ತರ ಕೊಡ್ತಾರೆ. ಟಿಕೆಟ್‌ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ ಅವರದೇ ಆದ ಹಿತೈಷಿಗಳು, ಬೆಂಬಲಿಗರ ಸಭೆ ನಡೆಸಿದರೆ ತಪ್ಪಲ್ಲ. ಕಳೆದ ಬಾರಿ ನನ್ನ ಮಗಳ ಚುನಾವಣೆಯಂತೆ ಲೋಕಸಭೆ ಚುನಾವಣೆಯಲ್ಲಿ ಅವರ ಪರವಾಗಿ ಕೆಲಸ ಮಾಡಿದ್ದೇನೆ. ಈ ಬಾರಿ ಸಂಯುಕ್ತಾ ಪಾಟೀಲ್‌ಗೆ ಟಿಕೆಟ್‌ ಕೊಟ್ಟಿದೆ. ಇದೊಂದು ರಾಷ್ಟ್ರೀಯ ಪಕ್ಷ. ಇಲ್ಲಿ ವೈಯಕ್ತಿಕ ಹಿತಾಸಕ್ತಿಗಿಂತ ಪಕ್ಷವೇ ಮುಖ್ಯ. ವಿಜಯಾನಂದ ಈಗಾಗಲೇ ಬಂದಿದ್ದಾರೆ. ವೀಣಾ ಕೂಡ ಶೀಘ್ರ ಪಕ್ಷದ ಕಾರ್ಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next