Advertisement

‘ಬಿಗ್‌ ಬಿ’ಯನ್ನು ಪಿಎಂ ಮಾಡಬಹುದಿತ್ತು

01:32 AM May 18, 2019 | mahesh |

ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, ”ನೀವು ಕಳೆದ ಬಾರಿ ಮೋದಿಯವರಿಗೆ ಮತ ಹಾಕಿ ಅವರನ್ನು ಪ್ರಧಾನಿಯಾಗಿಸಿದ್ದಿರಿ. ಅವರ ಬದಲಿಗೆ ಜಗತ್ತಿನ ಮಹಾ ನಟರಲ್ಲೊಬ್ಬರಾದ ಅಮಿತಾಭ್‌ ಬಚ್ಚನ್‌ರನ್ನು ತಂದು ಕೂರಿಸಿದ್ದರೆ ಚೆನ್ನಾಗಿರುತ್ತಿತ್ತು. ಬಿಗ್‌ ಬಿ ಪ್ರಧಾನಿಯಾಗಿದ್ದರೂ ಒಂದಿಷ್ಟು ಕೆಲಸ ಆಗುತ್ತಿದ್ದವೇನೋ, ಆದರೆ ಮೋದಿಯವರಿಂದ ಏನೂ ಅಭಿವೃದ್ಧಿಯಾಗಿಲ್ಲ” ಎಂದಿದ್ದಾರೆ. ”ಕಿಸಾನ್‌ ಸಮ್ಮಾನ್‌ ನಿಧಿಯಿಂದ ಪ್ರತಿಯೊಬ್ಬ ರೈತರಿಗೆ ಕೇವಲ 1 ರೂ. ಸಿಗಲಿದೆ. ಇದು ರೈತರಿಗೆ ಮೋದಿಯವರು ಮಾಡುತ್ತಿರುವ ಅಪಮಾನವಲ್ಲವೇ?” ಎಂದು ಟೀಕಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next