Advertisement

 ಲೋಕಸಭೆ ಚುನಾವಣೆ‌ ವ್ಯವಸ್ಥಿತ ನಿರ್ವಹಣೆೆ:ಜಿ.ಪಂ ಸಿಇಒ ಸೂಚನೆ

01:00 AM Mar 13, 2019 | Team Udayavani |

ಮಡಿಕೇರಿ:ಲೋಕಸಭೆ ಸಾರ್ವತ್ರಿಕ ಚುನಾವಣೆ ಸಂಬಂಧ ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿಗೊಂಡಿದ್ದು, ಸೆಕ್ಟರ್‌ ಅಧಿಕಾರಿಗಳು, ಫ್ಲೆçಯಿಂಗ್‌ ಸ್ಕ್ವಾಡ್‌, ವೀಡಿಯೋ ವಿವಿಂಗ್‌ ತಂಡ, ಹೀಗೆ ವಿವಿಧ ತಂಡಗಳ ಅಧಿಕಾರಿಗಳು ತಮಗೆ ವಹಿಸಿರುವ ಜವಾಬ್ದಾರಿಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವಂತೆ ಜಿ.ಪಂ.ಸಿಇಒ ಕೆ. ಲಕ್ಷ್ಮೀಪ್ರಿಯಾ ಅವರು ಸೂಚನೆ ನೀಡಿದ್ದಾರೆ.  

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಂಬಂಧಪಟ್ಟ   ನೋಡಲ್‌ ಅಧಿಕಾರಿಗಳ ಜತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.   

ಮಾದರಿ ನೀತಿ ಸಂಹಿತೆ ಉಲ್ಲಂಘನೆ ಯಾಗದಂತೆ ನೋಡಿಕೊಳ್ಳಬೇಕು. ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ವರದಿಯನ್ನು ಕಾಲ ಕಾಲಕ್ಕೆ ದಾಖಲೆ ಸಹಿತ ಒದಗಿಸಬೇಕು ಎಂದು ಸೂಚನೆ ನೀಡಿದರು. 

ಚುನಾವಣೆಯ ಪೂರ್ವಸಿದ್ಧತೆಯ ಸಂಪೂರ್ಣವಾದ ವೀಡಿಯೋ ಮತ್ತು ಪೋಟೋಗಳನ್ನು ಸಂಗ್ರಹಿಸಿಕೊಂಡು ಮುಂಜಾಗರೂಕತೆ ವಹಿಸಬೇಕು. ಚುನಾವಣೆಯ ಪೂರ್ವಸಿದ್ಧತೆಯ ಪ್ರತಿದಿನದ ವರದಿಯನ್ನು ಸಲ್ಲಿಸಬೇಕು. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಚುನಾವಣೆಗೆ ಪ್ರತಿಯೊಬ್ಬರೂ ಸಹಕರಿಸುವುದು ಮುಖ್ಯವಾಗಿದೆ ಎಂದು ತಿಳಿಸಿದರು.  ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ್‌ ಚುನಾವಣೆ ನಿರ್ದೇಶನಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಸಭೆ ಸಮಾರಂಭಗಳು, ರ್ಯಾಲಿ ಮೊದಲಾದವುಗಳತ್ತ ಗಮನ ಹರಿಸ ಬೇಕು ಎಂದು ಅವರು ತಿಳಿಸಿದರು.  

ಭೂದಾಖಲೆಗಳ  ಸಹಾಯಕ ನಿರ್ದೇಶಕರಾದ ಶಂಸುದ್ದೀನ್‌, ಐಟಿಡಿಪಿ ಅಧಿಕಾರಿ ಸಿ. ಶಿವಕುಮಾರ್‌, ಬಿಸಿಎಂ ಇಲಾಖೆ ಅಧಿಕಾರಿ ಅವಿನ್‌, ಕಾರ್ಮಿಕ ಇಲಾಖೆ ಅಧಿಕಾರಿ ರಾಮಕೃಷ್ಣ, ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ರಾಜಶೇಖರ, ಸೆಕ್ಟರ್‌, ಫ್ಲೈಯಿಂಗ್‌ ಸ್ಕ್ವಾಡ್‌, ವೀಡಿಯೋ ವಿವಿಂಗ್‌ ತಂಡದ ಅಧಿಕಾರಿಗಳು ಉಪಸ್ಥಿತರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next