Advertisement

ಲೋಕಸಭೆ-ವಿಧಾನಸಭೆ: ಬೆಳ್ತಂಗಡಿಯ ಒಲವು ಬದಲು!

02:05 AM Mar 28, 2019 | Sriram |

ಬೆಳ್ತಂಗಡಿ: ರಾಜಕೀಯವಾಗಿ ಹಲವು ಐತಿಹಾಸಿಕ ದಾಖಲೆಗಳನ್ನು ಕಂಡಿರುವ ವಿಧಾನಸಭಾ ಕ್ಷೇತ್ರ ಬೆಳ್ತಂಗಡಿ. ಹಲವು ಪ್ರಮುಖ ರಾಜಕೀಯ ನಾಯಕರ ತವರು. ಇಲ್ಲಿ ಎಂಎಲ್‌ಎ ಚುನಾವಣೆಯಲ್ಲಿ ಎಂಟು ಬಾರಿ ಕಾಂಗ್ರೆಸ್‌ ಗೆದ್ದರೆ, ನಾಲ್ಕು ಬಾರಿ ಬಿಜೆಪಿ ಗೆದ್ದಿದೆ. ಇಂಥ ಕ್ಷೇತ್ರದಲ್ಲಿ ನಿಧಾನವಾಗಿ ಚುನಾವಣೆಯ ಕಾವು ಏರುತ್ತಿದೆ.

Advertisement

2008ರಲ್ಲಿ ಕ್ಷೇತ್ರ ಪುನರ್‌ ವಿಂಗಡನೆಗೊಂಡು ಬೆಳ್ತಂಗಡಿಯು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಸೇರಿತು. 2008, 2013ರ ವಿಧಾನಸಭಾ ಚುನಾವಣೆಗಳಲ್ಲಿ ಕೆ. ವಸಂತ ಬಂಗೇರ ಅವರು ಕಾಂಗ್ರೆಸ್‌ನಿಂದ ಶಾಸಕರಾಗಿದ್ದರು. ಆದರೆ ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರವು 2009 ಮತ್ತು 2014ರಲ್ಲಿ ನಳಿನ್‌ಗೆ ಹೆಚ್ಚಿನ ಮತ ತಂದುಕೊಟ್ಟಿತ್ತು. ಆರಂಭದಲ್ಲಿ ಮಂಗಳೂರು, ಉಡುಪಿ, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳಾಗಿದ್ದಾಗ ಕಾರ್ಕಳ ಮತ್ತುಬೆಳ್ತಂಗಡಿ ವಿಧಾನಸಭಾ ಕ್ಷೇತ್ರಗಳು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದ್ದವು.

ಬೆಳ್ತಂಗಡಿ ಕ್ಷೇತ್ರದಲ್ಲಿ ಲೀಡ್‌
2008ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ. ವಸಂತ ಬಂಗೇರ (59,528 ಮತ) ಅವರು ಬಿಜೆಪಿಯ ಕೆ. ಪ್ರಭಾಕರ ಬಂಗೇರ (43,425) ಅವರ ವಿರುದ್ಧ 1,6103 ಮತಗಳಿಂದ ಗೆಲುವು ಪಡೆದಿದ್ದರು. 2009ರ ಲೋಕಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ಕ್ಷೇತ್ರದಲ್ಲಿ ಬಿಜೆಪಿಯ ನಳಿನ್‌ ಕುಮಾರ್‌ ಕಟೀಲು (66,176) ಕಾಂಗ್ರೆಸ್‌ನ ಬಿ. ಜನಾರ್ದನ ಪೂಜಾರಿ (54,951) ವಿರುದ್ಧ 11,225 ಹೆಚ್ಚು ಮತಗಳನ್ನು ಪಡೆದಿದ್ದರು.

2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ. ವಸಂತ ಬಂಗೇರ (74,530) ಬಿಜೆಪಿಯ ರಂಜನ್‌ ಜಿ. ಗೌಡ (58,789) ಅವರ ವಿರುದ್ಧ 15,741 ಮತ ಪಡೆದು ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದರು. 2014ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ನಳಿನ್‌ಕುಮಾರ್‌ (ಬಿಜೆಪಿ-83,966) ಅವರು ಜನಾರ್ದನ ಪೂಜಾರಿ (ಕಾಂಗ್ರೆಸ್‌-66,843) ವಿರುದ್ಧ 17,123 ಪಡೆದರು. 2018 ವಿಧಾನಸಭಾ ಚುನಾವಣೆಯಲ್ಲಿ ಹರೀಶ್‌ ಪೂಂಜ (ಬಿಜೆಪಿ-98,417) ಮತ್ತು ವಸಂತ ಬಂಗೇರ (ಕಾಂಗ್ರೆಸ್‌- 75,443) ವಿರುದ್ಧ 22,974 ಮತ ಪಡೆದರು.
2009ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಸದಾನಂದ ಗೌಡ4,00,812 ಮತ, ಕಾಂಗ್ರೆಸ್‌ನ ಜೆಪಿ ಹೆಗ್ಡೆ 3,74,127 ಮತ ಗಳಿಸಿದ್ದರು. ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸದಾನಂದ ಗೌಡ 5,225 ಮತಗಳನ್ನು ಹೆಚ್ಚು ಪಡೆದಿದ್ದರು. ಆದರೆ ಉಡುಪಿ ಜಿಲ್ಲೆಯಲ್ಲಿ ಹೆಗ್ಡೆ ಅವರು ಗೌಡರಿಗಿಂತ 12,489 ಮತ ಗಳಿಸಿದ್ದರು.

ಈ ಕ್ಷಣ ವೀಕ್ಷಣ
ಒಗ್ಗಟ್ಟಿನ‌ ಮಂತ್ರ ಜಪ
ಪ್ರಸ್ತುತ ಕೇಂದ್ರ ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬ ವಿಚಾರವನ್ನು ಅಸ್ತ್ರವಾಗಿಸಿಕೊಂಡು ಕಾಂಗ್ರೆಸ್‌ ಪ್ರತೀ ತಾಲೂಕಿನ ಕಾರ್ಯಕರ್ತನ್ನು ಭೇಟಿಯಾಗಿ ಮನವರಿಕೆ ಮಾಡುವ ಕಾರ್ಯತಂತ್ರ ರೂಪಿಸಿದೆ. ಬೆಳ್ತಂಗಡಿಯನ್ನೂ ಇದು ತಲುಪಿದೆ. ಈಗಾಗಲೇ 15 ಅಂಶಗಳನ್ನೊಳಗೊಂಡ ಸಾರ್ವಜನಿಕ ಮಾಹಿತಿ ಕೈಪಿಡಿ ಬಿಡುಗಡೆ ಮಾಡಿದೆ. ಮತ್ತೂಂದೆಡೆ, ರಾಜ್ಯದಲ್ಲಿ ಮೈತ್ರಿ ಸರಕಾರವಿದ್ದರೂ ಹೈಕಮಾಂಡ್‌ ಯುವ ಮುಖಂಡ ಮಿಥುನ್‌ ರೈಗೆ ಟಿಕೆಟ್‌ ನೀಡಿರುವುದರಿಂದ ಯುವ ಮತದಾರರನ್ನು ಸೆಳೆಯುವ ಯತ್ನದಲ್ಲಿದೆ. ಜಿಲ್ಲಾ ಉಸ್ತುವಾರಿ ಸಚಿವರೊಡಗೂಡಿ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸಾರ್ವಜನಿಕ ಸಭೆ ಹಮ್ಮಿಕೊಂಡಿದ್ದು, ಗೆಲುವು ನಮ್ಮದೇ ಎಂಬ ವಿಶ್ವಾಸದಲ್ಲಿದೆ.

Advertisement

ಶಕ್ತಿಕೇಂದ್ರದಲ್ಲಿ ಸಂಚಲನ
ಈಗಾಗಲೇ ಮೂರು ತಿಂಗಳುಗಳಿಂದ ಬಿಜೆಪಿಯು ಸಂಘಟನಾತ್ಮಕವಾಗಿ ಮೂರು ಹಂತಗಳಾಗಿ ಚುನಾವಣಾ ಪೂರ್ವ ತಯಾರಿ ನಡೆಸಿದೆ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರವನ್ನು 55 ಶಕ್ತಿಕೇಂದ್ರ, 8 ಮಹಾಶಕ್ತಿಕೇಂದ್ರ, 241 ಬೂತ್‌ಗಳಾಗಿ ವಿಂಗಡಿಸಿ ಸಭೆ, ಕಾರ್ಯಾಗಾರ ನಡೆಸಿದೆ. ಕೇಂದ್ರ ಸರಕಾರದ ಸಾಧನೆಯನ್ನು ಮನೆ ಮನೆಗೆ ಪ್ರಚಾರ ಮಾಡಲು ಸಂಚಾಲಕ, ಮತಗಟ್ಟೆ ಸಮಿತಿ ತಳ ಮಟ್ಟದಲ್ಲಿ ಕಾರ್ಯಕರ್ತರೊಡಗೂಡಿ ತೊಡಗಿದೆ.

– ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next