Advertisement

ಅಗಲಿದ ದವೆ, ಖನ್ನಾಗೆ ಶ್ರದ್ದಾಂಜಲಿ; ಲೋಕಸಭೆ ಮುಂದೂಡಿಕೆ

03:09 PM Jul 17, 2017 | Team Udayavani |

ಹೊಸದಿಲ್ಲಿ : ಸಂಸತ್ತಿನ ಮುಂಗಾರು ಅಧಿವೇಶನ ಇಂದು ಸೋಮವಾರ ಆರಂಭಗೊಂಡಿದ್ದು ಅಗಲಿದ ಸಂಸದ ವಿನೋದ್‌ ಖನ್ನಾ, ಕೇಂದ್ರ ಸಚಿವ ಅನಿಲ್‌ ದವೆ ಮತ್ತು ಇತರ ಕೆಲವು ಮಾಜಿ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಿದ ಬಳಿಕ ದಿನದ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

Advertisement

ಮುಂಗಾರು ಅಧಿವೇಶನದ ಮೊದಲ ದಿನವಾದ ಇಂದು, ನ್ಯಾಶನಲ್‌ ಕಾನ್ಫರೆನ್ಸ್‌  ನಾಯಕ ಫಾರೂಕ್‌ ಅಬ್ದುಲ್ಲ ಮತ್ತು ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ ನಾಯಕ ಪಿ ಕೆ ಕುನ್ಹಾಲಿಕುಟ್ಟಿ ಅವರು ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. 

ಫಾರೂಕ್‌ ಅವರು ಶ್ರೀನಗರ ಉಪಚುನಾವಣೆಯನ್ನು ಗೆದ್ದವರು; ಕುನ್ಹಾಲಿ ಕುಟ್ಟಿ ಮಲಪ್ಪುರಂ ಕ್ಷೇತ್ರದಿಂದ ಗೆದ್ದು ಬಂದವರು. ಅಬ್ದುಲ್ಲ ಅವರು ಕಾಶ್ಮೀರಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ ಕುನ್ಹಾಲಿಕುಟ್ಟಿ ಇಂಗ್ಲಿಷನ್ನು ಆಯ್ದುಕೊಂಡರು. 

Advertisement

Udayavani is now on Telegram. Click here to join our channel and stay updated with the latest news.

Next