Advertisement

ಲಾಕಪ್‌ಡೆತ್‌: ನಾಲ್ವರು ಪೊಲೀಸರ ಅಮಾನತು

07:20 AM Jul 14, 2018 | Team Udayavani |

ಮಂಡ್ಯ: ನಗರದ ಪಶ್ಚಿಮ ಠಾಣೆಯಲ್ಲಿ ಲಾಕಪ್‌ಡೆತ್‌ ಪ್ರಕರಣ ಸಂಬಂಧ ನಾಲ್ವರು ಪೊಲೀಸರನ್ನು ಅಮಾನತು
ಮಾಡಲಾಗಿದೆ. ಬೈಕ್‌ ಕಳ್ಳತನ ಆರೋಪದ ಮೇರೆಗೆ ಠಾಣೆಗೆ ಕರೆತಂದಿದ್ದ ಮದ್ದೂರು ತಾಲೂಕು ಬೆಳೂ¤ರು
ಗ್ರಾಮದ ಮೂರ್ತಿ (45) ಅನುಮಾನಾಸ್ಪದವಾಗಿ ಮೃತಪಟ್ಟ ವ್ಯಕ್ತಿ.

Advertisement

ಪೊಲೀಸರೇ ವಿಚಾರಣೆ ವೇಳೆ ಹೊಡೆದು ಸಾಯಿಸಿದ್ದಾರೆ. ಇದೊಂದು ಲಾಕಪ್‌ಡೆತ್‌ ಎಂದು ಆಪಾದಿಸಲಾಗಿದೆ. ಈ ಆರೋಪವನ್ನು ತಳ್ಳಿ ಹಾಕಿರುವ ಪೊಲೀಸರು ಬಾತ್‌ ರೂಂನಲ್ಲಿ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್‌ ಅಧೀಕ್ಷಕಿ ಜಿ. ರಾಧಿಕಾ, ಇನ್ನೆರಡು ದಿನಗಳಲ್ಲಿ ಸಿಐಡಿಗೆ ಪ್ರಕರಣ
ಹಸ್ತಾಂತರಗೊಳ್ಳಲಿದ್ದು, ಎಲ್ಲಾ ಹಂತಗಳಲ್ಲೂ ತನಿಖೆ ಪಾರದರ್ಶಕವಾಗಿ ನಡೆಯಲಿದೆ. ಘಟನೆ ಸಂಬಂಧ
ಪಿಎಸ್ಸೆ„ ಅನಂತಕುಮಾರ್‌, ಮುಖ್ಯಪೇದೆ ಮಾದೇಶ, ಪೇದೆಗಳಾದ ವರದರಾಜು, ಮಲ್ಲಿಕಾರ್ಜುನ ಅವರನ್ನು
ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next