Advertisement

ಬೀದಿಗಿಳಿದವರಿಗೆ ಲಾಠಿ ಏಟು

03:10 PM Mar 27, 2020 | Suhan S |

ಹಾಸನ: ಕೋವಿಡ್ 19 ಸೋಂಕು ನಿಯಂತ್ರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಲಾಕ್‌ ಡೌನ್‌ ಘೋಷಣೆ ಮಾಡಿರುವುದರಿಂದ ಹಾಸನ ಜಿಲ್ಲೆಯಲ್ಲಿ ಸೂಚನೆ ಮೀರಿ ರಸ್ತೆಗೆ ಬಂದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದರೆ, ಕೆಲವು ಕಡೆ ಬಸ್ಕಿ ಹೊಡೆಸಿ ಬುದ್ದಿ ಹೇಳಿದ್ದಾರೆ.

Advertisement

ಮಂಗಳವಾರ ಮಧ್ಯರಾತ್ರಿಯಿಂದಲೇ ಲಾಕ್‌ಡೌನ್‌ ಜಾರಿಯಾದರೂ ಯುಗಾದಿ ಹಬ್ಬದ ದಿನವಾದ ಬುಧವಾರ ಜನರು ಪೊಲೀಸರ ಸೂಚನೆಯನ್ನೂ ಲೆಕ್ಕಿಸದೇ ಮಾರುಕಟ್ಟೆಗೆ ಮುಗಿ ಬಿದ್ದು ಹಬ್ಬದ ಸಾಮಗ್ರಿ ಖರೀದಿಸಿದರು. ಆದರೆ ಹಬ್ಬ ಮುಗಿದ ಮರುದಿನವೂ ಕೆಲವರು ಸುಖಾ ಸುಮ್ಮನೆ ರಸ್ತೆಯಲ್ಲಿ ಅಡ್ಡಾಲಾರಂಭಿಸಿದವರಿಗೆ ಲಾಠಿ ಬೀಸಿ ಬುದ್ದಿ ಕಲಿಸಿದರು. ನಗರದ ಕಟ್ಟಿನಕೆರೆ ಮಾರುಕಟ್ಟೆ, ಮಹಾವೀರ ವೃತ್ತ, ಬಿ.ಎಂ.ರಸ್ತೆ ಮತ್ತಿತರ ಕಡೆ ಮುಖಮೂತಿ ನೋಡದೇ ಪೊಲೀಸರು ಲಾಠಿ ಬೀಸಿದರು. ಹೋಟೆಲ್‌ ಸಾಮ್ರಾಟ್‌ ರಸ್ತೆ ಗಳಲ್ಲಿ ಕಾರಣಲ್ಲದೆ ಓಡಾಡುತ್ತಿದ್ದ ಸ್ಥಳೀಯರಿಗೆ ಪೊಲೀಸರು ಲಾಠಿ ಬೀಸಿದರು. ವಿವಿಧ ಕಾರಣ ಹೇಳಿ ತಪ್ಪಿಸಿಕೊಳ್ಳಲೆತ್ನಿಸಿದರೂ ಪೊಲೀಸರು ಕವಿಗೊಡದೇ ಲಾಠಿ ಏಟು ನೀಡಿದರು.

ಅಗತ್ಯ ವಸ್ತುಗಳ ಸಾಗಣೆಯ ವಾಹನಗಳ ಹೊರತುಪಡಿಸಿ ಪ್ರಯಾಣಿಕರ ವಾಹನಗಳ ಸಂಚಾರ ರದ್ದುಪಡಿಸಿದ್ದರೂ ಬೆಂಗಳೂರು- ಮಂಗಳೂರು, ಮಂಗಳೂರು – ಬೆಂಗಳೂರು ನಡುವೆ ಖಾಸಗಿ ವಾಹನಗಳು ಬುಧವಾರ ರಾತ್ರಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದುದನ್ನು ಪತ್ತೆ ಹಚ್ಚಿದ ಆಲೂರು ಠಾಣೆ ಪೊಲೀಸರು ವಾಹನ ಚಾಲಕರಿಗೆ ಲಾಠಿ ಏಟು ನೀಡಿ ದಂಡ ವಸೂಲಿ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next