Advertisement

ಲಾಕ್‌ಡೌನ್‌ ಸಡಿಲ; ಸಂಚಾರ ವಿರಳ

04:58 AM May 21, 2020 | Team Udayavani |

ಸಿದ್ದಾಪುರ: ಲಾಕ್‌ಡೌನ್‌ ಸಡಿಲಗೊಳಿಸಿದ್ದರೂ ಜನರು ಈಗಾಗಲೇ ಅದಕ್ಕೆ ಒಗ್ಗಿಕೊಂಡಿರುವ ಕಾರಣವೋ ಏನೋ ಪಟ್ಟಣದಲ್ಲಿ ಜನರು ಕಳೆದ ಎರಡು ತಿಂಗಳಿಂದ ಅನುಸರಿಸಿಕೊಂಡು ಬರುತ್ತಿರುವಂತೆ ಸಡಿಲಿಕೆ ಆದ ನಂತರವೂ ಅನುಸರಿಸುತ್ತಿರುವುದು ಕಂಡುಬಂದಿದೆ.

Advertisement

ಜಿಲ್ಲೆಯಲ್ಲಿ ಬೆಳಗಿನ 7ರಿಂದ ಸಂಜೆ 6ರ ವರೆಗೆ ಲಾಕ್‌ಡೌನ್‌ ಸಡಿಲಗೊಳಿಸಿದ್ದು, ಬುಧವಾರ ಪಟ್ಟಣದಲ್ಲಿ ಜನಸಂದಣಿ ಕಡಿಮೆಯಾಗಿತ್ತು. ಅಲ್ಲದೇ ಸರಿಯಾಗಿ ಸಂಜೆ 6ಕ್ಕೆ ಅಂಗಡಿ, ಮಳಿಗೆಗಳನ್ನು ಮುಚ್ಚಿ ತಮ್ಮ ಮನೆಗಳತ್ತ ಸಾಗಿದ್ದರು. ಸಂಜೆ 6:30ರ ವೇಳೆಗೆ ಕಚೇರಿ, ಖಾಸಗಿ ಸಂಸ್ಥೆಗಳಿಂದ ತೆರಳುವ ಬೆರಳೆಣಿಕೆಯ ಉದ್ಯೋಗಿಗಳನ್ನು ಹೊರತುಪಡಿಸಿದರೆ ಜನರು ಸಂಚರಿಸದೇ ರಸ್ತೆಗಳು ಬಿಕೋ ಎನ್ನತೊಡಗಿದ್ದವು. ಅಧಿ ಕಾರಿಗಳು ಕಾನೂನನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದರೆ ಸಾರ್ವಜನಿಕರೂ ಅದಕ್ಕೆ ಸ್ಪಂದಿಸುತ್ತಾರೆ ಎಂದು ಹಿರಿಯರೊಬ್ಬರು ಈ ದೃಶ್ಯವನ್ನು ಉದಾಹರಣೆಯಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next