Advertisement

ಕಾರ್ಮಿಕರ ವಲಸೆ: ನಿರ್ಮಾಣ ವಲಯಕ್ಕೆ ಲಾಕ್‌?

10:46 AM Apr 27, 2021 | Team Udayavani |

ಬೆಂಗಳೂರು: ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುವ ನಿರ್ಮಾಣ ಮತ್ತು ಸಂಬಂಧಿಸಿದ ಕ್ಷೇತ್ರಗಳನ್ನು ಕೋವಿಡ್‌ ನಿರ್ಬಂಧಗಳಿಂದ ಸರ್ಕಾರ ಹೊರಗಿಟ್ಟಿದೆ. ಆದರೂ ಆ ವಲಯಗಳು ಎಂದಿನಂತೆ ಕಾರ್ಯಾಚರಣೆ ಮಾಡುವುದು ಅನುಮಾನ!

Advertisement

ಯಾಕೆಂದರೆ, ಸರ್ಕಾರವು ಜನತಾ ಕರ್ಫ್ಯೂ ಘೋಷಣೆ ಮಾಡಿದ ಬೆನ್ನಲ್ಲೇ ಅತಿಹೆಚ್ಚಿನ ಸಂಖ್ಯೆಯಲ್ಲಿಮರುವಲಸೆ ಹೋಗುತ್ತಿರುವುದು ಕಾರ್ಮಿಕ ವರ್ಗ. ಅದರಲ್ಲೂ ವಿಶೇಷವಾಗಿ ಕಲ್ಯಾಣ ಕರ್ನಾಟಕ ಮತ್ತು ಈಶಾನ್ಯ ರಾಜ್ಯಗಳ ಕಾರ್ಮಿಕರು ಹೆಚ್ಚಾಗಿದ್ದಾರೆ. ಇದು ನಿರ್ಮಾಣ ವಲಯವನ್ನು ತೀವ್ರವಾಗಿ ಬಾಧಿಸಲಿದೆ. ಯಾವುದೇ ಭರವಸೆಗಳನ್ನು ನೀಡಿದರೂ, ಕ್ಯಾಂಪ್‌ ಗಳಲ್ಲಿದ್ದ ಕಾರ್ಮಿಕರು ಕೇಳುತ್ತಿಲ್ಲ. ಈಗಾಗಲೇ ಶೇ. 50ರಷ್ಟು ಜನ ತಮ್ಮ ಊರುಗಳಿಗೆ ತೆರಳಿದ್ದಾರೆ.

ಬೆಂಗಳೂರು ಮಾತ್ರವಲ್ಲ; ಮಂಗಳೂರು, ಹುಬ್ಬಳ್ಳಿ ಮತ್ತಿತರ ಮಹಾನಗರಗಳಲ್ಲೂ ಇದೇ ಸಮಸ್ಯೆ ಆಗಿದೆ.ನಿರ್ಮಾಣ ವಲಯದ ಚಟುವಟಿಕೆಗಳು ಎಂದಿನಂತೆ ಮುಂದುವರಿಯಲು ಅವಕಾಶ ಮಾಡಿಕೊಟ್ಟಿದ್ದರೂ, ಕಾರ್ಮಿಕರ ಕೊರತೆಯಿಂದ ಮುನ್ನಡೆಸುವುದೇ ಕಷ್ಟವಾಗಲಿದೆ ಎಂದು ಕ್ರೆಡಾಯ್‌ (ಕಾನ್ಫೇಡರೇಷನ್‌ಆಫ್ ರಿಯಲ್‌ ಎಸ್ಟೇಟ್‌ ಡೆವಲಪರ್ ಅಸೋಸಿಯೇಷನ್‌) ರಾಜ್ಯ ಘಟಕದ ಉಪಾಧ್ಯಕ್ಷ ಪ್ರದೀಪ್‌ ರಾಯ್ಕರ್‌ ತಿಳಿಸುತ್ತಾರೆ.

ಹೊರರಾಜ್ಯ ಕಾರ್ಮಿಕರು: ಪಶ್ಚಿಮ ಬಂಗಾಳ ಚುನಾವಣೆ ಹಿನ್ನೆಲೆಯಲ್ಲಿ ಎರಡು ತಿಂಗಳು ಹಿಂದೆಯೇಹೋದ ಕಾರ್ಮಿಕರು ಇನ್ನೂ ವಾಪಸ್ಸಾಗಿಲ್ಲ. ಅಷ್ಟರಲ್ಲಿಇಲ್ಲಿ ಸಮಸ್ಯೆ ಉಂಟಾಗಿದೆ. ಈ ಮಧ್ಯೆ ಕಲಬುರಗಿ,ರಾಯಚೂರು, ಯಾದಗಿರಿ ಮತ್ತಿತರ ಕಡೆಗಳಿಂದಮಹಾನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರು, ಸರ್ಕಾರ ಜನತಾ ಕರ್ಫ್ಯೂ ಘೋಷಣೆ ಮಾಡಿದ ಬೆನ್ನಲ್ಲೇ ಊರುಗಳತ್ತ ಮುಖಮಾಡುತ್ತಿದ್ದಾರೆ. ನಗರದಲ್ಲಿ ಉಂಟಾದ ಹಾಸಿಗೆಗಳ ಸಮಸ್ಯೆಗಳನ್ನು ನೋಡಿದ್ದಾರೆ.

ಅಲ್ಲದೆ, ಕೇವಲ 15 ದಿನಗಳಲ್ಲಿ ಈ ನಿರ್ಬಂಧ ಮುಗಿಯುವುದಿಲ್ಲ ಎಂಬ ಮನಃ ಸ್ಥಿತಿಯಲ್ಲಿದ್ದಾರೆ. ಕಳೆದ ಬಾರಿಯ ಲಾಕ್‌ಡೌನ್‌ ಕೂಡಕಣ್ಮುಂದೆ ಇದೆ. ಇನ್ನು ಲಾಕ್‌ಡೌನ್‌ ತೀವ್ರವಾದರೆ,ದಿನಗೂಲಿಗೂ ಕತ್ತರಿ ಬೀಳಬಹುದು. ಊಟ ಸೇರಿದಂತೆಪ್ರತಿಯೊಂದಕ್ಕೂ ಅವಲಂಬನೆ ಆಗಬೇಕಾಗುತ್ತದೆ. ಈ ಎಲ್ಲ ಹಿನ್ನೆಲೆಯಲ್ಲಿ ಜನ ಕಾಲ್ಕೀಳುತ್ತಿದ್ದಾರೆ. ರೈಲ್ವೆ ಸೇವೆಗಳಿಗೂ ನಿರ್ಬಂಧ ಘೋಷಣೆಯಾದರೆ, ಇದು ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಪ್ರದೀಪ್‌ ರಾಯ್ಕರ್‌ ಹೇಳುತ್ತಾರೆ.

Advertisement

ಶಹರದ ಸಹವಾಸ ಬೇಡ ಸರ್‌: ಸರ್‌, ಈಗ ಮಾಲಿಕರು ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ. ಇಲ್ಲಿಯೇ ಆರಾಮಾಗಿ ಇರಬಹುದು. ಲಾಕ್‌ಡೌನ್‌ ಜಾರಿಯಾದರೂ ಸಂಬಳಕ್ಕೆಕತ್ತರಿ ಹಾಕುವುದಿಲ್ಲ ಎಂದೆಲ್ಲಾ ಭರವಸೆ ನೀಡುತ್ತಾರೆ. ಆದರೆ, ಕಳೆದ ಬಾರಿಯಂತಾದರೆ ಏನು ಮಾಡೋದು? ಕೆಲಸ ಇಲ್ಲದಿದ್ದರೂ ಪರವಾಗಿಲ್ಲ. ಊರಲ್ಲೇ ಇರುತ್ತೇವೆ. ಈ ಶಹರದ ಸಹವಾಸ ಬೇಡ ಎಂದು ಕಲುಬುರಗಿಯತ್ತ ಹೊರಟ ಗಿರಿಯಪ್ಪ ಕೋಳಿ ತಿಳಿಸಿದರು.

ಕೃಷಿ ಹೊರತುಪಡಿಸಿದರೆ, ಅತಿಹೆಚ್ಚು ಕಾರ್ಮಿಕರನ್ನುಹೊಂದಿರುವ ವಲಯ ನಿರ್ಮಾಣ ಉದ್ಯಮ. ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರದ ಕಾರ್ಮಿಕರು ಹೆಚ್ಚಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಹಾಕಿದ ನಿರ್ಬಂಧಗಳಿಂದ ಆಕಾರ್ಮಿಕರನ್ನು ಹಿಡಿದಿಡುವುದು ತುಸು ಕಷ್ಟ ಆಗಬಹುದು. ಆದರೆ, ಈ ನಿಟ್ಟಿನಲ್ಲಿ ಉದ್ಯಮಿಗಳ ಜತೆ ಸರ್ಕಾರ ಕೂಡ ಮನಸ್ಸು ಮಾಡಬೇಕಾಗುತ್ತದೆ.ಕಾರ್ಮಿಕರಲ್ಲಿ ಆತ್ಮವಿಶ್ವಾಸ ತುಂಬುವ ಕ್ರಮಗಳಿಗೆ ಮುಂದಾಗಬೇಕು.

ಏನು ಮಾಡಬಹುದು? ಕ್ಯಾಂಪ್‌ಗ್ಳಲ್ಲಿ ಉಚಿತ ಲಸಿಕೆ ಅಭಿಯಾನ ನಡೆಸಲು ನೆರವಾಗಬೇಕು. ಆಯ್ದ ಕಡೆಗಳಲ್ಲಿ ಕೋವಿಡ್ ಪರೀಕ್ಷೆ ಶಿಬಿರ ನಡೆಸಬೇಕು.ಸೋಂಕು ದೃಢಪಟ್ಟವರನ್ನು ಪ್ರತ್ಯೇಕವಾಗಿಡುವುದು. ಅವರೆಲ್ಲರಿಗೂ ಆಹಾರ, ಚಿಕಿತ್ಸಾ ಸೌಲಭ್ಯದಂತಹ ಕ್ರಮಕೈಗೊಳ್ಳಬೇಕಾಗುತ್ತದೆ. ಹಾಗಂತ, ಎಲ್ಲವನ್ನೂ ಸರ್ಕಾರಮಾಡಬೇಕು ಎಂದು ನಾನು ಹೇಳುವುದಿಲ್ಲ; ಸರ್ಕಾರನೆರವಾದರೆ, ಉದ್ಯಮಿಗಳೂ ಕೈಜೋಡಿಸುತ್ತಾರೆ ಎಂದು ಕ್ರೆಡಾಯ್‌ ಮೆಂಟರ್‌ ಬಾಲಕೃಷ್ಣ ಹೆಗಡೆ ತಿಳಿಸುತ್ತಾರೆ.

ನಗರದಲ್ಲಿ ನಾಲ್ಕೂವರೆ ಲಕ್ಷ ಅಧಿಕ ಕಾರ್ಮಿಕರು : ಬೆಂಗಳೂರಿನಲ್ಲೇ ಸುಮಾರು ನಾಲ್ಕೂವರೆ ಲಕ್ಷ ಕಾರ್ಮಿಕರಿರಬಹುದು ಎಂದುಅಂದಾಜಿಸಲಾಗಿದೆ. ಈ ಪೈಕಿ ಕೆಲವರು ಈಗಾಗಲೇವಲಸೆ ಹೋಗಿದ್ದಾರೆ. ಉಳಿದವರನ್ನು ಹಿಡಿದಿಡಬೇಕಾಗಿದೆ. ಇನ್ನು ಅಪಾರ್ಟ್‌ಮೆಂಟ್‌ಗಳವ್ಯಾಪಾರ ವಹಿವಾಟು ಕೊರೊನಾ ಪೂರ್ವದಲ್ಲಿರುವಂತೆ ಇದೆ. ನಗರದಲ್ಲಿ ಕೊರೊನಾ ಪೂರ್ವ ದಲ್ಲಿ ವಾರ್ಷಿಕ 35-40 ಸಾವಿರ ಯೂನಿಟ್‌ಗಳುಮಾರಾಟ ಆಗುತ್ತಿದ್ದವು. ಈಗ ವಾರ್ಷಿಕ 30ಸಾವಿರ ಯೂನಿಟ್‌ಗಳು ಮಾರಾಟ ಆಗುತ್ತಿವೆ ಎಂದು ಬಾಲಕೃಷ್ಣ ಹೆಗಡೆ ಅಭಿಪ್ರಾಯಪಟ್ಟರು.

-ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next