Advertisement

ಮಂಗಳವಾರ ರಾತ್ರಿಯಿಂದಲೇ ಜಿಲ್ಲೆಯಲ್ಲಿ ಲಾಕ್‌ಡೌನ್‌ ಜಾರಿ

06:24 PM Apr 28, 2021 | Team Udayavani |

ಮಂಡ್ಯ: ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರಾಜ್ಯಾದ್ಯಂತ ಬುಧವಾರದಿಂದ ಲಾಕ್‌ಡೌನ್‌ ಜಾರಿ ಮಾಡಿರುವಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ 9ರಿಂದಲೇ ಎಲ್ಲಾಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸಲಾಯಿತು.

Advertisement

ಮಂಡ್ಯ ನಗರ ಸೇರಿದಂತೆ ಮದ್ದೂರು, ಶ್ರೀರಂಗಪಟ್ಟಣ,ಪಾಂಡವಪುರ, ಮಳವಳ್ಳಿ, ಕೆ.ಆರ್‌.ಪೇಟೆ ಹಾಗೂ ನಾಗಮಂಗಲಪಟ್ಟಣಗಳಲ್ಲೂ ಜನಸಂದಣಿ ವಿರಳವಾಗಿತ್ತು.

ಲಾಕ್‌ಡೌನ್‌ ನಿಯಮಉಲ್ಲಂಘಿಸಿ ಅನಗತ್ಯ ಹೊರಗೆ ಬಂದರೆ ದಂಡ ಬೀಳುವುದು ಗ್ಯಾರಂಟಿ.ಈಗಾಗಲೇ ವಾರಾಂತ್ಯ ಕರ್ಫ್ಯೂನಲ್ಲಿ ಅನಗತ್ಯವಾಗಿ ಹೊರಗೆಬಂದಿದ್ದವರಿಗೆ ಪೊಲೀಸರು ದಂಡದ ಜತೆಗೆ ಲಾಠಿ ರುಚಿ ತೋರಿಸಿದ್ದರು.ಇನ್ನೂ 14 ದಿನಗಳ ಕಾಲ ಇದು ಮುಂದುವರೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next