Advertisement

ಲಾಕ್‌ಡೌನ್‌: ನೀರುಪಾಲಾದ ಸಾವಿರಾರು ಲೀ. ಹಾಲು

04:17 PM Apr 01, 2020 | Suhan S |

ರಾಯಬಾಗ: ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಸಮೀಪದ ಪಾಲಬಾಂವಿ ಗ್ರಾಮದ ಗೌಳಿಗರು ತಾವು ಎರಡು ತಂಡವಾಗಿ ದಿನನಿತ್ಯ ಸಂಗ್ರಹಿಸಿದ ಸುಮಾರು 3000 ಲೀಟರ್‌ ಹಾಲನ್ನು ಗ್ರಾಮದ ಹೊರವಲಯದಲ್ಲಿ ಹರಿಯುತ್ತಿರುವ ಘಟಪ್ರಭಾ ಎಡದಂಡೆ ಕಾಲುವೆಗೆ ಸುರಿದ ಘಟನೆ ನಡೆದಿದೆ.

Advertisement

ಗೌಳಿಗರ ಪ್ರಮುಖರಾದ ಹುಸೇನ್‌ ರಮಜಾನ್‌ ಕಲಾಲ್‌ ಹಾಗೂ ಹೈದರ್‌ ಮುಜಾವರ್‌ ಮಾತನಾಡಿ, ಒಂದು ದಿನಕ್ಕೆ ಸುಮಾರು 60 ಸಾವಿರ ರೂ. ನಂತೆ ಬಿಲ್ಲು ಹಾಲು ಉತ್ಪಾದಕರಿಗೆ ಪ್ರತಿ ವಾರ ಸಂದಾಯ ಮಾಡುತ್ತಿದ್ದು, ಸಂಗ್ರಹಿಸಿದ ಹಾಲನ್ನು ತೇರದಾಳ, ಕುಡಚಿ, ರಾಯಬಾಗ, ಮೊರಬ ಸೇರಿದಂತೆ ಪುಣೆ-ಮುಂಬೈ ಕಡೆಗೆ ಕಳುಹಿಸಲಾಗುತ್ತಿತ್ತು. ಸೋಮವಾರ ಕುಡಚಿಯಲ್ಲಿ ಪೊಲೀಸರು ಹಾಲಿನ ವಾಹನವನ್ನು ಸೀಜ್‌ ಮಾಡಿದ ಪರಿಣಾಮವಾಗಿ ಉಳಿದ ಹಾಲನ್ನು ಪಾಲಬಾವಿಯ ಘಟಪ್ರಭಾ ಕಾಲುವೆಗೆ ಸುರಿಯಲಾಯಿತು. ಇದರಿಂದ ಗೌಳಿಗರಿಗೆ ತುಂಬಾ ನಷ್ಟವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾ.ಪಂ.ನವರು ಗೌಳಿಗರಿಗೆ ಹಾಗೂ ಹಾಲು ಉತ್ಪಾದಕರಿಗೆ ಪರಿಹಾರದ ಜೊತೆಗೆ ಹಾಲು ಕಳುಹಿಸಲು ಸಮರ್ಪಕ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.

ಗೌಳಿಗರಾದ ಗೋಪಾಲ ಬಳಿಗಾರ, ದಾನಪ್ಪ ಮಾದರ, ಹಣಮಂತ ಮಾದರ, ಅಬ್ಟಾಸ್‌ ಚೌಧರಿ, ಮಹಾಲಿಂಗ ಹಂದಿಗುಂದ, ಚಿಕ್ಕಪ್ಪ ಸುಲ್ತಾನಪೂರ, ದಾವಲ್‌ ಕಲಾಲ, ಮಲ್ಲಪ್ಪ ಮಾದರ, ನೀಲಪ್ಪ ನಾಯಿಕ ಇದ್ದರು.

ಹಾಲು ಸಂಗ್ರಹಿಸುವ ಗೌಳಿಗರಿಗೆ ಗ್ರಾ.ಪಂ ನೊಟೀಸ್‌: ಗ್ರಾಮದಲ್ಲಿರುವ ಡೇರಿಗೆ ಅತಿ ಹೆಚ್ಚು ಜನರು ಸೇರುವ ಸಾಧ್ಯತೆಯಿರುವುದರಿಂದ ಹಾಲು ಸಂಗ್ರಹಿಸದಂತೆ ಗ್ರಾ.ಪಂ ಕಾರ್ಯದರ್ಶಿ ಗೌಳಿಗರಿಗೆ ನೊಟೀಸ್‌ ನೀಡಿದ್ದಾರೆ. ಇದು ಗೌಳಿಗರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next