Advertisement

ಲಾಕ್‌ ತೆರೆದರೂ ಜನರು ಮನೆ ಬಿಡಲಿಲ್ಲ ; ರಾಜ್ಯಾದ್ಯಂತ ಜನ, ವಾಹನ ಸಂಚಾರ ವಿರಳ

04:03 AM May 20, 2020 | Hari Prasad |

ಬೆಂಗಳೂರು: ಕೋವಿಡ್ ಲಾಕ್‌ಡೌನ್‌ ಸಡಿಲಿಕೆಯಾಗಿದ್ದರೂ ಜನರ ಮನಸ್ಸಿನ ಭೀತಿ ಇನ್ನೂ ದೂರವಾದಂತಿಲ್ಲ.

Advertisement

ರಾಜ್ಯಾದ್ಯಂತ ಮಂಗಳವಾರದಿಂದ ಸಾರಿಗೆ ಸಂಚಾರಕ್ಕೆ ಅವಕಾಶ ಮುಕ್ತವಾಗಿದ್ದರೂ ಓಡಾಟ ಮಾತ್ರ ಅಲ್ಪ ಪ್ರಮಾಣದಲ್ಲಿದ್ದುದೇ ಇದಕ್ಕೆ ಸಾಕ್ಷಿ.

ಅಷ್ಟೇ ಅಲ್ಲ, ಜನ ಸಂಚಾರ ಮತ್ತು ವಾಹನ ಸಂಚಾರ ವಿರಳವಾಗಿತ್ತು. ಸರಕಾರಿ ಕಚೇರಿಗಳಲ್ಲೂ ಈ ಪರಿಣಾಮ ಎದ್ದು ಕಾಣಿಸುತ್ತಿತ್ತು.

ರಾಜ್ಯ ಸರಕಾರ ರಾಜ್ಯಾದ್ಯಂತ ಬಸ್‌ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ಆದರೆ ಮೊದಲ ದಿನ ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಿಕರು ಕಂಡುಬರಲಿಲ್ಲ.

ಕೆಎಸ್ಸಾರ್ಟಿಸಿಯು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಿಂದ ಅಂತರ್‌ ಜಿಲ್ಲಾ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರೂ ಸಾರ್ವಜನಿಕರು ಸಮೂಹ ಸಾರಿಗೆಯಲ್ಲಿ ಸಂಚರಿಸಲು ಹಿಂದೇಟು ಹಾಕಿದಂತಿತ್ತು.

Advertisement

ಅಂತರ್‌ ಜಿಲ್ಲಾ ಪ್ರಯಾಣ ಕೈಗೊಂಡರೂ ತವರು ಜಿಲ್ಲೆಗೆ ಹೋದರೆ ಕ್ವಾರಂಟೈನ್‌ ವ್ಯವಸ್ಥೆಯಲ್ಲಿ 14 ದಿನ ಉಳಿಯಬೇಕಾಗುತ್ತದೆ ಎಂಬ ಆತಂಕದಿಂದ ಅನೇಕರು ಪ್ರಯಾಣ ಮುಂದೂಡಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಸರಕಾರಿ ಕಚೇರಿಗಳಲ್ಲೂ ಜನ ವಿರಳ
ಲಾಕ್‌ಡೌನ್‌ ಸಡಿಲಿಕೆ ಮಾಡಿದ್ದರಿಂದ ಎಲ್ಲ ಇಲಾಖೆಗಳ ನೌಕರರು ಕಡ್ಡಾಯವಾಗಿ ಹಾಜರಾಗಲು ಸೂಚನೆ ನೀಡಲಾಗಿತ್ತು. ಆದರೆ ಮೊದಲ ದಿನ ಬಹುತೇಕ ಇಲಾಖೆಗಳಲ್ಲಿ ಪೂರ್ಣಪ್ರಮಾಣದ ಸಿಬಂದಿ ಹಾಜರಾಗದಿರುವುದು ಕಂಡುಬಂತು.

Advertisement

Udayavani is now on Telegram. Click here to join our channel and stay updated with the latest news.

Next