Advertisement

ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಮಾರ್ಗಸೂಚಿ ದುರ್ಬಲಗೊಳಿಸುವಂತಿಲ್ಲ

04:16 PM May 19, 2020 | Hari Prasad |

ನವದೆಹಲಿ: 31 ರವರೆಗೂ ದೇಶವ್ಯಾಪಿ ಲಾಕ್‌ ಡೌನ್‌ ವಿಸ್ತರಣೆ ಮಾಡಿ ಕೇಂದ್ರ ಹೊರಡಿಸಿರುವ ಮಾರ್ಗಸೂಚಿಯನ್ನು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವು ದುರ್ಬಲಗೊಳಿಸುವಂತಿಲ್ಲ ಎಂದು ಗೃಹ ಸಚಿವಾಲಯ ಸೂಚಿಸಿದೆ.

Advertisement

11ರಂದು ಪ್ರಧಾನಿ ಮೋದಿ ಹಾಗೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ನಡೆದ ಸಂವಾದದ ಬಳಿಕ, ಸಿಎಂಗಳ ಅಭಿಪ್ರಾಯಗಳನ್ನು ಆಲಿಸಿಯೇ 4ನೇ ಹಂತದ ಲಾಕ್‌ಡೌನ್‌ನ ಮಾರ್ಗಸೂಚಿಗಳನ್ನು ಘೋಷಿಸಲಾಗಿದೆ. ಹಾಗಾಗಿ, ಯಾವುದೇ ರಾಜ್ಯ ಕೂಡ ಕೇಂದ್ರದ ಮಾರ್ಗಸೂಚಿಯನ್ನು ನಿಸ್ಸಾರಗೊಳಿಸುವಂತಿಲ್ಲ.

ಬದಲಿಗೆ, ತಮ್ಮ ತಮ್ಮ ರಾಜ್ಯದ ಸ್ಥಿತಿಗೆ ಅನುಗುಣವಾಗಿ ವಿವಿಧ ವಲಯಗಳಲ್ಲಿ ಕೆಲವೊಂದು ಚಟುವಟಿಕೆಗಳಿಗೆ ನಿರ್ಬಂಧ ಹೇರಬಹುದು ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಭಲ್ಲಾ ತಿಳಿಸಿದ್ದಾರೆ.

ಇದೇ ವೇಳೆ ಆರೋಗ್ಯ ಕಾರ್ಯದರ್ಶಿ ಪ್ರೀತಿ ಸುಧನ್‌ ಕೂಡ ರೆಡ್‌, ಆರೆಂಜ್‌, ಗ್ರೀನ್‌ ಝೋನ್‌ಗಳನ್ನು ವರ್ಗೀಕರಿಸುವ ಮಾರ್ಗಸೂಚಿಯ ಬಗ್ಗೆ ಪತ್ರ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next