Advertisement

10 ವಾಣಿಜ್ಯ ಮಳಿಗೆಗಳಿಗೆ ಬೀಗ

07:41 PM Apr 29, 2021 | Team Udayavani |

ಕುಷ್ಟಗಿ: ಪಟ್ಟಣದ ಬನ್ನಿಕಟ್ಟೆ ಸಂತೆ ಮೈದಾನದಲ್ಲಿ ಪುರಸಭೆ ಅಧೀನದಲ್ಲಿದ್ದ 10 ವಾಣಿಜ್ಯ ಮಳಿಗೆಗಳ ಅನಧಿಕೃತ ಬಳಕೆ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿ ಉಮೇಶ ಕೆ. ಹಿರೇಮಠ ನೇತೃತ್ವದಲ್ಲಿ ಬೀಗ ಜಡಿಯಲಾಯಿತು.

Advertisement

ಸಂತೆ ಮೈದಾನದಲ್ಲಿ 10 ವಾಣಿಜ್ಯ ಮಳಿಗೆಗಳಲ್ಲಿ ಕಾಯಿಪಲ್ಲೆ ವ್ಯಾಪಾರಸ್ಥರು ಕಾಯಿಪಲ್ಲೆ ಸಂಗ್ರಹಿಸಿಕೊಳ್ಳಲು ಬಳಕೆಯಲ್ಲಿತ್ತು. ಬುಧವಾರ ಪುರಸಭೆ ಮುಖ್ಯಾ ಧಿಕಾರಿ ಉಮೇಶ ಹಿರೇಮಠ ಮಳಿಗೆಗಳಲ್ಲಿ ದಾಸ್ತಾನು ಮಾಡಿದ್ದ ಕಾಯಿಪಲ್ಲೆ ಹೊರಗಿಟ್ಟುಕೊಳ್ಳುವಂತೆ ಸೂಚಿಸಿದರು. ಆಗ ಯಾರೂ ಕಾಯಿಪಲ್ಲೆ ಮಳಿಗೆಗಳಿಂದ ಹೊರಗಿಡಲು ಮುಂದಾಗಲಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿಗಳು ಕೂಡಲೇ 10 ಹೊಸ ಬೀಗ ತರಿಸಿ, ಎಲ್ಲ ಮಳಿಗೆಗಳ ಬಾಗಿಲು ಹಾಕಲು ಮುಂದಾದಾಗ, ವ್ಯಾಪಾರಸ್ಥರು ದಾಸ್ತಾನು ಮಾಡಿಕೊಂಡಿದ್ದ ಕಾಯಿಪಲ್ಲೆ, ಸೊಪ್ಪು ಹೊರಗಿಟ್ಟುಕೊಳ್ಳಲು ಯತ್ನಿಸಿದರು.

ಇದೇ ವೇಳೆ ಪೌರ ಕಾರ್ಮಿಕರು ಕಾಯಿಪಲ್ಲೆ ದಾಸ್ತಾನು ಹೊರಗಿಡಲು ನೆರವಾದರು. ನಂತರ 10 ವಾಣಿಜ್ಯ ಮಳಿಗೆಗಳಿಗೆ ಬೀಗ ಹಾಕಿದರು. ಈ ಕುರಿತು ಮುಖ್ಯಾ ಧಿಕಾರಿ ಉಮೇಶ ಹಿರೇಮಠ ಪ್ರತಿಕ್ರಿಯಿಸಿ, ತಾಲೂಕು ಕ್ರೀಡಾಂಗಣದಲ್ಲಿ ಕಾಯಿಪಲ್ಲೆ ಲಿಲಾವಿಗೆ ಅವಕಾಶವಿದೆ. ಅಲ್ಲಿ ಖರೀ ದಿಸಿದ ಕಾಯಿಪಲ್ಲೆ ಓಣಿಯಲ್ಲಿ ತಳ್ಳುಗಾಡಿಯಲ್ಲಿ ಮಾರಬೇಕು. ಸಾಮಾಜಿಕ ಅಂತರ, ಮಾಸ್ಕ್ ಧರಿಸದೇ ಕೆಲವು ವ್ಯಾಪಾರಸ್ಥರು ಬನ್ನಿಕಟ್ಟೆ ಸಂತೆ ಮೈದಾನದಲ್ಲಿ ಮಾರಾಟಕ್ಕೆ ಮುಂದಾಗಿದ್ದಾರೆ. ಅಲ್ಲದೇ ಕಾಯಿಪಲ್ಲೆಯನ್ನು ಪುರಸಭೆ ಮಳಿಗೆ ಗಳಲ್ಲಿ ದಾಸ್ತಾನು ಮಾಡಿರುವುದು ತೆರವು ಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next