Advertisement

ಲಾಕ್ ಡೌನ್ ಎಫೆಕ್ಟ್: ಕಾಲುವೆಗೆ ಸುರಿದರು ಸಾವಿರಗಟ್ಟಲೆ ಲೀಟರ್ ಹಾಲು

12:43 PM Mar 31, 2020 | keerthan |

ಬೆಳಗಾವಿ: ಕೋವಿಡ್-19 ಲಾಕ್ ಡೌನ್ ನಿಂದ ಹಾಲಿನ ವ್ಯಾಪಾರದ ಮೇಲೂ ಪರಿಣಾಮ ಬಿದಿದ್ದು, ಹಾಲು ಕೊಳ್ಳುವವರಿಲ್ಲದೇ ಗೌಳಿ ಸಮುದಾಯ ಹಾಲನ್ನು ನಾಲೆಗೆ ಸುರಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

Advertisement

ರಾಯಬಾಗ ತಾಲೂಕಿನ ಪಾಲಭಾಂವಿಯಲ್ಲಿ ಯುವಕರು ಸುಮಾರು 1500 ಕ್ಕೂ ಹೆಚ್ಚು ಲೀಟರ್ ಹಾಲನ್ನು ಕಾಲುವೆಗೆ ಸುರಿದಿದ್ದಾರೆ. ಖರೀದಿ ಮತ್ತು ಮಾರಾಟದಲ್ಲಿ ತೀವ್ರ ಕುಸಿತ ಹಾಗೂ ದರ ಕಡಿಮೆಯಾದ ಕಾರಣ ಈ ರೀತಿ ಮಾಡಲಾಗಿದೆ.ಯುವಕರು ಹಾಲನ್ನು ಕಾಲುವೆಗೆ ಸುರಿದಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹಾಲಿಗೆ ಈ ಮೊದಲು ಸಿಗುತ್ತಿದ್ದ ದರ ಸಿಗದೆ ಅಸಮಾಧಾನಗೊಂಡ ಯುವಕರು ಘಟಪ್ರಭಾ ಎಡದಂಡೆ ಕಾಲುವೆಗೆ ತಾವು ಸಂಗ್ರಹಸಿದ ಹಾಲು ಸುರಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next