Advertisement

ಲಾಕ್ ಡೌನ್ ಹಿನ್ನಲೆ ಮಾರಾಟವಾಗದ ಕಲ್ಲಂಗಡಿ: ನೇಣಿಗೆ ಶರಣಾದ ರೈತ

09:10 AM Apr 01, 2020 | keerthan |

ಕಲಬುರಗಿ: ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ಕೈಗೆ ಬಂದ ಕಲ್ಲಂಗಡಿ ಬೆಳೆ ಮಾರಾಟವಾಗದೇ ಇರುವುದರಿಂದ ಕಂಗಾಲಾದ ರೈತ ನೇಣಿಗೆ ಶರಣಾಗಿದ್ದಾನೆ.

Advertisement

ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಲಾಡ ಚಿಂಚೋಳಿ ಗ್ರಾಮದ ರೈತ ಚಂದ್ರಕಾಂತ ಬಿರಾದಾರ (45) ನೇಣಿಗೆ ಶರಣಾಗಿದ್ದಾರೆ. ಸೋಮವಾರ ರಾತ್ರಿ ಜಮೀನಿನಲ್ಲಿಯೇ ರೈತ ನೇಣಿಗೆ ಶರಣಾಗಿದ್ದಾನೆ.

ರೈತ ಚಂದ್ರಕಾಂತ ಬಿರಾದಾರ್ ಸುಮಾರು ಮೂರು  ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಹಣ್ಣು ಬೆಳೆದಿದ್ದರು. ಆದರೆ ಲಾಕ್ ಡೌನ್ ಹಿನ್ನಲೆ ಹಣ್ಣು ಸಾಗಾಟ ಮಾಡಲು ಆಗದ ಹಿನ್ನಲೆ ಮನನೊಂದು ನೇಣಿಗೆ ಶರಣಾಗಿದ್ದಾರೆ.

ಸಾಲ ಮಾಡಿ ಬೆಳೆಯಲಾದ ಕಲ್ಲಂಗಡಿ ಖರೀದಿ ಮಾಡಲು ಯಾವುದೇ ವ್ಯಾಪಾರಸ್ಥರು (ಮಧ್ಯವರ್ತಿಗಳ) ಮುಂದೆ ಬಂದಿರಲಿಲ್ಲ. ಕಟಾವು ಮಾಡಿದ ಬೆಳೆ ಸಾಗಾಟ ಮಾಡಲೂ ಸಾಧ್ಯವಾಗದೇ ರೈತ ನೊಂದಿದ್ದರು ಎನ್ನಲಾಗಿದೆ. ತನಿಖಾ ಕಾರ್ಯ ಮುಂದುವರೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next