Advertisement

ಸ್ಥಳ ಮಹಜರು: ನಕ್ಸಲರಿಬ್ಬರು ಕಾರ್ಕಳಕ್ಕೆ

02:36 AM May 05, 2022 | Team Udayavani |

ಕಾರ್ಕಳ: ನಕ್ಸಲ್‌ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಬಿ.ಜಿ. ಕೃಷ್ಣಮೂರ್ತಿ ಮತ್ತು ಸಾವಿತ್ರಿಯನ್ನು ಮೇ 4ರಂದು ಪೊಲೀಸರು ಕಾರ್ಕಳಕ್ಕೆ ಕರೆತಂದಿದ್ದಾರೆ.

Advertisement

ಹಿರಿಯ ಪೊಲೀಸ್‌ ಅಧಿಕಾರಿಗಳ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ವಿಜಯಪ್ರಸಾದ್‌ ಅವರು ಡಿಎಆರ್‌, ಎಎನ್‌ಎಫ್ ಪೊಲೀಸರ ಭದ್ರತೆಯೊಂದಿಗೆ ನಕ್ಸಲರಿಬ್ಬರನ್ನು ಕರೆತಂದರು. ಈ ಹಿನ್ನೆಲೆಯಲ್ಲಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಕಾರ್ಕಳ, ಹೆಬ್ರಿ, ಅಜೆಕಾರು ಪೊಲೀಸ್‌ ಠಾಣೆ ವ್ಯಾಪ್ತಿಯ ಹಳೆ ಪ್ರಕರಣಗಳಿಗೆ ಸಂಬಂಧಿಸಿ ಸ್ಥಳ ಮಹಜರು ನಡೆಸಲು ಇವರಿಬ್ಬರನ್ನು ಕರೆತರಲಾಗಿದೆ. ಮೊದಲ ಹಂತದಲ್ಲಿ 12 ದಿನಗಳ ವರೆಗೆ ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದೆ. ಮೇ 4ರಂದು ಇಬ್ಬರನ್ನು ಕೋರ್ಟ್‌ಗೆ ಹಾಜರುಪಡಿಸಲಾಯಿತು.

ದಿನಗಳಲ್ಲಿ ಅಜೆಕಾರು, ಕಾರ್ಕಳ, ಹೆಬ್ರಿ ಠಾಣೆಗಳ ವ್ಯಾಪ್ತಿಯ 12 ಪ್ರಕರಣಗಳಿಗೆ ಸಂಬಂಧಿಸಿ ವಿಚಾರಣೆ ನಡೆಯಲಿದೆ. ನಕ್ಸಲರಿಬ್ಬರನ್ನು ಕಸ್ಟಡಿಯಲ್ಲಿ ಇರಿಸಿಕೊಳ್ಳಲಾಗಿರುವ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಬಿಗು ಪೊಲೀಸ್‌ ಭದ್ರತೆ ನಿಯೋಜಿಸಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next