Advertisement

ಮಾ. 23-24ರಂದು ಕಾಪುವಿನ ಮೂರೂ ಮಾರಿಗುಡಿಗಳಲ್ಲಿ ಕಾಲಾವಧಿ ಸುಗ್ಗಿ ಮಾರಿಪೂಜೆ

09:07 PM Mar 22, 2021 | Team Udayavani |

ಕಾಪು : ಕಾಪು ಶ್ರೀ ಹಳೇ ಮಾರಿಗುಡಿ ದೇವಸ್ಥಾನ, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಶ್ರೀ ಮೂರನೇ ಮಾರಿಗುಡಿ ದೇವಸ್ಥಾನಗಳಲ್ಲಿ ಏಕಕಾಲದಲ್ಲಿ ನಡೆಯುವ ಕಾಪುವಿನ ಕಾಲಾವಧಿ ಸುಗ್ಗಿ ಮಾರಿಪೂಜೆಯು ಮಾ. 23 ಮತ್ತು 24ರಂದು ನಡೆಯಲಿದೆ.

Advertisement

ತುಳುನಾಡಿನ ಏಳು ಪ್ರಮುಖ ಜಾತ್ರೆಗಳಲ್ಲಿ ಒಂದಾಗಿರುವ ಕಾಲಾವಧಿ ಸುಗ್ಗಿ ಮಾರಿಪೂಜೆಗೆ ಪೂರ್ವಭಾವಿಯಾಗಿ ಮೂರೂ ಮಾರಿಗುಡಿಗಳ ಸುತ್ತಮುತ್ತಲೂ ವಿವಿಧ ಸಿದ್ಧತೆಗಳು ಪೂರ್ಣಗೊಂಡಿವೆ.

ಕೊರೊನಾ ಆತಂಕದ ಕಾರಣದಿಂದಾಗಿ ಮೂರು ಮಾರಿಗುಡಿಗಳ ಸುತ್ತಲೂ ಸ್ಯಾನಿಟೇಷನ್ ಮಾಡಲಾಗಿದ್ದು, ಭಕ್ತಾಧಿಗಳಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಪಾಲನೆ ಮಾಡಿಕೊಂಡು ದೇವರ ದರ್ಶನಕ್ಕೆ ಬರುವಂತೆ ವಿನಂತಿಸಲಾಗಿದೆ.

ಮೂರೂ ಮಾರಿಗುಡಿಗಳಲ್ಲೂ ಸರಕಾರ, ಜಿಲ್ಲಾಡಳಿತ, ತಾಲೂಕು ಆಡಳಿತ ಸೇರಿದಂತೆ ವಿವಿಧೆಡೆಗಳಿಂದ ಬಂದ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಕೊಂಡು ಮತ್ತು ಸರಕಾರದ ನಿರ್ದೇಶನದಂತೆ ಮಾರಿಪೂಜೆ ನಡೆಸುವ ಬಗ್ಗೆ ಮಾರಿಗುಡಿಗಳ ಆಡಳಿತ ಮಂಡಳಿಗಳು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಸಂಪ್ರಧಾಯವನ್ನು ಪಾಲಿಸಿಕೊಂಡು ಯಥಾವತ್ತಾಗಿ ಹಿಂದಿನಂತೆಯೇ ಸುಗ್ಗಿ ಮಾರಿಪೂಜೆಯನ್ನು ನಡೆಸಲು ಅವಕಾಶ ಮಾಡಿಕೊಡಲಾಗುತ್ತಿದೆ.

ಸುಗ್ಗಿ ಮಾರಿಪೂಜೆಗೆ ಪೂರ್ವಭಾವಿಯಾಗಿ ಕೊರೊನಾ ಮುನ್ನೆಚ್ಚರಿಕಾ ಕ್ರಮವಾಗಿ ಮೂರು ಮಾರಿಗುಡಿಗಳ ಸುತ್ತಲೂ ಸ್ಯಾನಿಟೇಷನ್ ಮಾಡಲಾಗಿದ್ದು, ಭಕ್ತಾಽಗಳಲ್ಲಿ ಜಾಗೃತಿ ಮೂಡಿಸಲು ಅಲ್ಲಲ್ಲಿ ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಕಾಪಾಡುವಂತೆ ಮನವಿ ಮಾಡುವ ಫಲಕಗಳನ್ನು ಅಳವಡಿಸಲಾಗಿದೆ. ಸರತಿ ಸಾಲಿನಲ್ಲಿ ಬರುವಂತೆ ಗೇಟುಗಳನ್ನು ಅಳವಡಿಸಿದ್ದು, ಪೊಲೀಸರು ಕೂಡಾ ಸೂಕ್ತ ಬಂದೋಬಸ್ತ್‌ಗಾಗಿ ವಿವಿಧ ಸಿದ್ಧತೆಗಳನ್ನು ನಡೆಸಿದ್ದಾರೆ.

Advertisement

ಕಾಪು ಸುಗ್ಗಿಮಾರಿಪೂಜೆಯ ಬಂದೋಬಸ್ತ್‌ಗಾಗಿ ಕಾರ್ಕಳ ಉಪ ವಿಬಾಗದ ಪೋಲಿಸ್ ಉಪಾಽಕ್ಷಕ ಭರತ್ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಹಳೇ ಮಾರಿಗುಡಿ ಸಭಾಂಗಣದಲ್ಲಿ ಸೋಮವಾರ ಪೊಲೀಸ್ ಬ್ರೀಫಿಂಗ್ ಸಭೆ ನಡೆಯಿತು. ಕಾಪು ವೃತ್ತ ನಿರೀಕ್ಷಕ ಪ್ರಕಾಶ್, ಕಾಪು ಎಸ್ಸೈ ರಾಘವೇಂದ್ರ ಸಿ. ಹಾಗೂ ಕಾಪು ವೃತ್ತ ವ್ಯಾಪ್ತಿಯ ಪೊಲೀಸ್ ಅಽಕಾರಿಗಳು ಮತ್ತು ಸಿಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸುಗ್ಗಿ ಮಾರಿಪೂಜೆಯ ಪ್ರಯುಕ್ತ ವಾಹನ ಸಂಚಾರ ಮತ್ತು ಭಕ್ತಾಽಗಳ ನೂಕುನುಗ್ಗಲು ನಿಯಂತ್ರಣಕ್ಕಾಗಿ ೧ ಡಿವೈಎಸ್ಪಿ, ೨ ಸರ್ಕಲ್ ಇನ್ಸ್‌ಪೆಕ್ಟರ್, ೮ ಮಂದಿ ಪಿಎಸ್ಸೈ, ೨೨ ಮಂದಿ ಎಎಸ್ಸೈ ಮತ್ತು ೨೧೦ ಮಂದಿ ಪೊಲೀಸ್ ಸಿಬ್ಬಂದಿಗಳು ನಿಯೋಜಿಸಲಾಗಿದೆ. ವಾಹನ ನಿಲಗಡೆಗೆ ನಾಲ್ಕು ಕಡೆಗಳಲ್ಲಿ ಸೆಕ್ಟರ್ ನಿರ್ಮಾಣ ಮಾಡಿ, ೯ ಕಡೆಗಳಲ್ಲಿ ಚೆಕ್‌ಪೋಸ್ಟ್ ಅಳವಡಿಸಿ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ. ಭಕ್ತರಿಗೆ ವಾಹನ ಪಾರ್ಕಿಂಗ್ ಮಾಡಲು ಕಾಪು ಡಿಗ್ರಿ ಕಾಲೇಜು ಮೈದಾನ, ವಿದ್ಯಾನಿಕೇತನ ಶಾಲೆಯ ಮೈದಾನ, ಬಂಗ್ಲೆ ಮೈದಾನ, ಬಂಟರ ಸಂಘದ ಮೈದಾನ, ಪುರಸಭೆಯ ಆವರಣದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಕೊರೊನಾ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಲು ಮನವಿ : ಸುಗ್ಗಿ ಮಾರಿಪೂಜೆಗೆ ಬರುವ ಭಕ್ತಾಧಿಗಳು ಯಾವುದೇ ಆತಂಕವಿಲ್ಲದೇ ಕೊರೊನಾ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿಕೊಂಡು ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಬಂದು ಮಾರಿಪೂಜೆಯಲ್ಲಿ ಪಾಲ್ಗೊಂಡು ತಮ್ಮ ಹರಕೆಗಳನ್ನು ಸಲ್ಲಿಸಬಹುದಾಗಿದೆ ಎಂದು ಹಳೇ ಮಾರಿಗುಡಿ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್ ಶೆಣೈ, ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯ ಮತ್ತು ಮೂರನೇ ಮಾರಿಗುಡಿಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್ ಬಂಗೇರ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next