Advertisement

ಮುಜಫ‌ರನಗರ : ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ

04:58 PM Jan 28, 2017 | Team Udayavani |

ಮುಜಫ‌ರನಗರ : ತಾನೇ ಸ್ವತಃ ಪ್ರತ್ಯಕ್ಷದರ್ಶಿಯಾಗಿರುವ ತನ್ನ ಪುತ್ರನ ಕೊಲೆ ಕೇಸನ್ನು ಹಿಂಪಡೆಯಲು ನಿರಾಕರಿಸಿದ ಕಾರಣಕ್ಕೆ ಸ್ಥಳೀಯ ಬಿಜೆಪಿ ನಾಯಕನನ್ನು ಗುಂಡಿಕ್ಕಿ ಸಾಯಿಸಲಾದ ಘಟನೆ ನಡೆದಿದೆ.

Advertisement

ಕಳೆದ ಜನವರಿ 26ರಂದು ಸ್ಥಳೀಯ ಬಿಜೆಪಿ ನಾಯಕ, ಶೋಭರಾಮ್‌ ಆರ್ಯ (60) ಅವರ ಮೇಲೆ ನಗ್ಲಾ ಖೇಪಾದ್‌ ಗ್ರಾಮದಲ್ಲಿ ಗುಂಡಿನ ದಾಳಿ ನಡೆಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಒಡನೆಯೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಅವರು ಕೊನೆಯುಸಿರೆಳೆದರು. 

ಈ ನಡುವೆ ನಗ್ಲಾ ಗ್ರಾಮದಲ್ಲಿ ಭದ್ರತೆಯನ್ನು ಬಿಗುಗೊಳಿಸಲಾಗಿದೆ. ಹೆಚ್ಚುವರಿ ಪೊಲೀಸ್‌ ಸಿಬಂದಿಗಳನ್ನು ನಿಯೋಜಿಸಲಾಗಿದೆ.

ಶೋಭರಾಮ್‌ ಅವರ ಪುತ್ರನ ಕೊಲೆ 2014ರಲ್ಲಿ ನಡೆದಿತ್ತು. ಈ ಕೊಲೆಗೆ ಅವರ ಓರ್ವ ಪ್ರತ್ಯಕ್ಷದರ್ಶಿಯಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next