Advertisement

Congress ಬಿಟ್ಟಿ ಭಾಗ್ಯಗಳ ಪರಿಣಾಮವೇ ಲೋಡ್‌ ಶೆಡ್ಡಿಂಗ್‌: ಸಚಿವೆ ಶೋಭಾ ಕರಂದ್ಲಾಜೆ

12:00 AM Oct 14, 2023 | Team Udayavani |

ಸುರಪುರ: ರಾಜ್ಯದ ಜನತೆ ಲೋಡ್‌ ಶೆಡ್ಡಿಂಗ್‌ ಎದುರಿಸು ವಂತಾಗಿದೆ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 200 ಯೂನಿಟ್‌ ಉಚಿತ ಕೊಟ್ಟ ಸರಕಾರಕ್ಕೆ ವಿದ್ಯುತ್‌ ಖರೀದಿಸಲು ದುಡ್ಡಿಲ್ಲ, ಬಳ್ಳಾರಿ ರಾಯಚೂರು ಥರ್ಮಲ್‌ ಪವರ್‌ಗಳಿಂದ ಜೆಸ್ಕಾಂ ವಿದ್ಯುತ್‌ ಖರೀದಿಸಲು ಹಣವಿಲ್ಲ. ಇದರಿಂದ ಲೋಡ್‌ ಶೆಡ್ಡಿಂಗ್‌ ಮಾಡುತ್ತಿದ್ದಾರೆ. ಕಳೆದ ತಿಂಗಳು ರಾಜ್ಯದ ನ್ಯಾಯಾಧೀಶರಿಗೆ ವಾರ ತಡ ಮಾಡಿ ಸಂಬಳ ಕೊಟ್ಟರು. ಶಿಕ್ಷಕರು ಹಾಗೂ ಇತರ ನೌಕರರಿಗೆ 20 ದಿನ ತಡವಾಗಿ ಸಂಬಳ ಕೊಟ್ಟರು. ಅಧಿಕಾರಕ್ಕೆ ಬಂದ ಐದಾರು ತಿಂಗಳಲ್ಲಿ ಸರಕಾರ ದಿವಾಳಿಯಾಗಿದೆ. ನಾಲ್ಕು ವರ್ಷಗಳಲ್ಲಿ ರಾಜ್ಯದ ಹಣಕಾಸು ಸ್ಥಿತಿ ಅಧೋಗತಿಯಾಗಲಿದೆ. ಈ ಬಗ್ಗೆ ಸರಕಾರ ಯೋಚನೆ ಮಾಡುತ್ತಿಲ್ಲ. ಕೇವಲ ಗ್ಯಾರಂಟಿ ಇಟ್ಟುಕೊಂಡು ಇಡೀ ರಾಜ್ಯವನ್ನೇ ಬರ್ಬಾದ್‌ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಪಂಚ ಭಾಗ್ಯಗಳೊಂದಿಗೆ ರಾಜ್ಯಕ್ಕೆ ಕತ್ತಲು ಭಾಗ್ಯ ಕರುಣಿಸಿದ್ದಾರೆ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next