Advertisement

ದೈವ ಆರಾಧನೆಯಿಂದ ಜೀವನ ಸಾರ್ಥಕ: ವಿಷ್ಣು ಆಸ್ರ

12:45 AM Feb 15, 2019 | |

ಮಧೂರು: ದೈವ ಆರಾಧನೆ ಯಿಂದ ಜೀವನ ಸಾರ್ಥಕವೆಂದು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ಅಭಿಪ್ರಾಯಪಟ್ಟರು.

Advertisement

ಮಾಂಗಾಲಮೂಲೆ ರಕ್ತೇಶ್ವರಿ, ನಾಗ, ಗುಳಿಗ ದೈವಗಳ ಬ್ರಹ್ಮಕಲಶೋತ್ಸವವನ್ನು ದೀಪ ಪ್ರಜ್ವಲಿಸಿ ಅವರು ಆಶೀರ್ವಚನ ನೀಡಿದರು.

ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ತಾರಾನಾಥ ಮಧೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವೇ|ಮೂ| ಮೇಲಿನ ಮನೆ ವೆಂಕಟ ಕೃಷ್ಣ ಕಲ್ಲೂರಾಯ, ಬ್ರಹ್ಮಶ್ರೀ ಕೇಶವ ಪುರೋಹಿತ, ಕೆ.ಜಿ. ಶ್ಯಾನುಭೋಗ್‌, ಮಧೂರು ಪಂಚಾಯತ್‌ ಅಧ್ಯಕ್ಷೆ ಮಾಲತಿ ಸುರೇಶ್‌, ರವೀಂದ್ರ ರೈ, ಶಶಿಧರ, ರಾಧಾಕೃಷ್ಣ ಕೆ. ಉಳಿಯತ್ತಡ್ಕ ಶುಭಹಾರೈಸಿದರು. ಬಿ.ಬಾಲಕೃಷ್ಣ ಅಗ್ಗಿತ್ತಾಯ, ಮಧೂರು ಪಂ. ಉಪಾಧ್ಯಕ್ಷ ದಿವಾಕರ ಆಚಾರ್ಯ, ಚಂದ್ರಶೇಖರ ಕೆ.ಆರ್‌, ಜನಾದ‌ìನ, ಕೆ.ಜಿ. ಮೋಹನದಾಸ್‌, ಶಂಕರ ಕೆ, ವಿಠಲ ಗಟ್ಟಿ, ಉಮೇಶ ಗಟ್ಟಿ, ಪುಷ್ಪಾ, ಸುರೇಶ್‌ ವಿ.ಆರ್‌., ಮಮತಾ ಕೆ.ಪಿ., ಸುಕುಮಾರ ಕುದ್ರೆಪ್ಪಾಡಿ, ಮೊದಲಾದವರು ಉಪಸ್ಥಿತರಿದ್ದರು.
 
ಸಪ್ತಗಿರಿ ಭಜನ ಸಂಘ ಕಾಸರಗೋಡು, ಶ್ರೀ ಗುರು ಕೃಪಾ ಭಜನ ಸಂಘ ಇವರಿಂದ ಭಜನ ಕಾರ್ಯಕ್ರಮ ನಡೆಯಿತು. ಕ್ಷೇತ್ರ ಮಹಿಳಾ ಸಮಿತಿಯ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
 

Advertisement

Udayavani is now on Telegram. Click here to join our channel and stay updated with the latest news.

Next