Advertisement

ದೋರನಹಳ್ಳಿಯಲ್ಲಿ ಜಾನುವಾರು ಚಿಕಿತ್ಸಾ ಶಿಬಿರ

06:34 PM Sep 01, 2020 | Suhan S |

‌ಶಹಾಪುರ: ತಾಲೂಕಿನಾದ್ಯಂತ ಜಾನುವಾರುಗಳು ಲಂಪಿ ಚರ್ಮ ರೋಗ ಬಾಧೆಯಿಂದ ನರಳುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಗ್ರಾಮದಲ್ಲಿ ಉಚಿತ ಜಾನುವಾರುಗಳ ಚಿಕಿತ್ಸಾ ಶಿಬಿರ ನಡೆಸಲಾಗುತ್ತಿದೆ ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕ ಷಣ್ಮುಖ ಗೊಂಗಡಿ ತಿಳಿಸಿದರು.

Advertisement

ತಾಲುಕಿನ ದೋರನಹಳ್ಳಿ ಗ್ರಾಮದಲ್ಲಿಸೋಮವಾರ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯಿಂದ ಹಮ್ಮಿಕೊಂಡ ಉಚಿತ ಜಾನುವಾರು ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.  ದೋರನಹಳ್ಳಿಯಲ್ಲಿ ಕಳೆದ ವಾರ ಎರಡು ಎತ್ತು ಮೃತಪಟ್ಟಿದ್ದು, ಈ ಕುರಿತು ಮಾಹಿತಿ ಪಡೆಯಲಾಗಿದೆ. ತಾಲೂಕಿನ ಹತ್ತಾರು ಗ್ರಾಮಗಳಲ್ಲಿ ಜಾನುವಾರುಗಳಿಗೆ ಲಂಪಿ ಚರ್ಮ ರೋಗ ಕಾಣಿಸಿಕೊಂಡಿದೆ. ಇದು ಸಾಂಕ್ರಾಮಿಕ ಕಾಯಿಲೆ ಆಗಿದ್ದು, ಇದಕ್ಕೆ ಸಮರ್ಪಕ ಔಷಧಿ ಇಲ್ಲ. ಮೈಮೇಲೆ ಗುಳ್ಳೆ ಬಂದ, ನಿಶ್ಯಕ್ತವಾದ ಮತ್ತು ಆಹಾರ, ಮೇವು ಸೇವಿಸದ ಜಾನುವಾರುಗಳನ್ನು ಪ್ರತ್ಯೇಕವಾಗಿ ಕಟ್ಟಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಶೀಘ್ರ ಗುಣಮುಖ ಆಗುತ್ತವೆ. ರೈತರು ಭಯಪಡಬೇಕಿಲ್ಲ. ಜಾನುವಾರುಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚುವ ಔಷಧ ನೀಡಲಾಗುತ್ತಿದೆ. ರೈತರು ತಮ್ಮ ಜಾನುವಾರುಗಳ ಆರೋಗ್ಯ ಪರೀಕ್ಷಿಸಬೇಕು ಎಂದರು.

ಇದೇ ವೇಳೆ 65 ಜಾನುವಾರುಗಳಿಗೆ ಲಿಂಪಿ ಚರ್ಮ ಕಾಯಿಲೆ ತಗುಲಿರುವುದು ಪತ್ತೆ ಆಯಿತು. ಅವುಗಳಿಗೆ ಸಮರ್ಪಕ ಚಿಕಿತ್ಸೆ ನೀಡಲಾಯಿತು. ಶಿಬಿರದಲ್ಲಿ 200ರಿಂದ 250 ಜಾನುವಾರುಗಳಿಗೆ ಖನಿಜಾಂಶ ಔಷಧ, ಮಾತ್ರೆ ಮತ್ತು ಇಂಜೆಕ್ಷನ್‌ ನೀಡಲಾಯಿತು. ಪಶು ವೈದ್ಯಾಧಿಕಾರಿ ಡಾ| ವಿಶ್ವನಾಥ ಬಾಳಿ, ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಫಕ್ರುದ್ದೀನ್‌, ಪಶು ವೈದ್ಯಕೀಯ ಪರೀಕ್ಷಕರಾದ ಮಾಶಪ್ಪ, ಶಿವಶರಣಪ್ಪ ಸಾವಳಗಿ, ಹೈದರಲಿ ಹಾಗೂ ಇಲಾಖೆ ಸಿಬ್ಬಂದಿ ಹಾಜರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next