Advertisement
2025ಕ್ಕೆ ಕಾಲುಬಾಯಿ ರೋಗವನ್ನು ಲಸಿಕೆ ಹಾಕುವ ಮೂಲಕ ನಿಯಂತ್ರಿಸಿ 2030ಕ್ಕೆ ರೋಗ ಸಂಪೂರ್ಣ ನಿರ್ಮೂಲನೆಗೊಳಿಸುವ ಸಲುವಾಗಿ ಕೇಂದ್ರ ಸರಕಾರ ಯೋಜನೆಗೆ ಚಾಲನೆ ನೀಡಿತ್ತು. ಹೀಗಾಗಿ ವರ್ಷಕ್ಕೆ ಎರಡು ಬಾರಿ ವ್ಯಾಕ್ಸಿನೇಶನ್ ಹಮ್ಮಿಕೊಳ್ಳುತ್ತ ಬಂದಿದೆ. 2020, ಸೆ. 11ರಂದು ರಾಜ್ಯದಲ್ಲಿ ಯೋಜನೆ ಆರಂಭಗೊಂಡಿದ್ದು, ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಂಡಿದೆ.
Related Articles
Advertisement
5 ತಂಡಗಳ ರಚನೆ :
ತಾಲೂಕು ಪಶುಸಂಗೋಪನ ಇಲಾಖೆ, ದ.ಕ. ಹಾಲು ಒಕ್ಕೂಟ ನಿಯಮಿತ ಸಹಭಾಗಿತ್ವದಲ್ಲಿ ಸಮೀಕ್ಷೆ ನಡೆದಿದೆ. ಜಿಲ್ಲೆಯ 300ಕ್ಕೂ ಅಧಿಕ ಇಲಾಖೆ ಸಿಬಂದಿ, ಕೃತಕ ಗರ್ಭಧಾರಣೆ ಕಾರ್ಯ ಕರ್ತರ ಸಹಕಾರದಿಂದ ವ್ಯಾಕ್ಸಿನೇಶನ್ ಹಾಗೂ ಕಿವಿಯೋಲೆ ಅಳವಡಿಸುವ ಯಶಸ್ವಿಯಾಗಿದೆ.
ಗೋ ಕಳವು ತಡೆಗೆ ಸಹಕಾರಿ :
ಕರಾವಳಿ ಭಾಗದಲ್ಲಿ ಗೋ ಕಳವು ಹಾಗೂ ಗೋಹತ್ಯೆ ಪ್ರಕರಣಗಳು ಹೆಚ್ಚು ಸಂಭವಿಸುತ್ತಿರುವುದರಿಂದ ಜಾನುವಾರುಗಳ ಗುರುತು ಪತ್ತೆಗೆ ಯುಐಡಿ ಟ್ಯಾಗ್ ಸಹಾಯಕವಾಗಲಿದೆ. ಐಎನ್ಎಎಚ್ (ಇನ್ಫಾರ್ಮೇಶನ್ ನೆಟ್ವರ್ಕ್ ಫಾರ್ ಅನಿಮಲ್ ಪ್ರೊಡಕ್ಟಿವಿಟಿ ಆ್ಯಂಡ್ ಹೆಲ್ತ್) ಜಾನುವಾರು ತಳಿ, ಅಭಿವೃದ್ಧಿ ಹಾಗೂ ಜಾನುವಾರು ಆರೋಗ್ಯದ ಪೂರ್ಣ ವಿವರಗಳನ್ನು ನೀಡುವ ಒಂದು ತಂತ್ರಾಂಶ. ಇದನ್ನು ನ್ಯಾಷನಲ್ ಡೈರಿ ಡೆವಲಪ್ಮೆಂಟ್ ಬೋರ್ಡ್
(ಎನ್ಡಿಡಿಬಿ)ಅಭಿವೃದ್ಧಿಪಡಿಸಿದೆ. ಇದರಲ್ಲಿ ಜಾನುವಾರುಗಳ ನೋಂದಣಿ, ಜಾನುವಾರು ಮತ್ತು ಮಾಲಕರ ಪೂರ್ಣ ವಿವರ, ಆರೋಗ್ಯ, ಹಾಲಿನ ಉತ್ಪಾದನೆ ಮಾಹಿತಿ ಲಭ್ಯವಾಗುತ್ತದೆ. ಜಾನುವಾರು ಸಾಗಾಟಕ್ಕೂ ಟ್ಯಾಗ್ ಕಡ್ಡಾಯ. ಯುಐಡಿ ಟ್ಯಾಗ್ 12 ಸಂಖ್ಯೆಗಳನ್ನು ಹೊಂದಿರುವ ಕಿವಿಯೋಲೆಯಾಗಿದೆ. ಇದಕ್ಕೆ ಮಾಲಕರ ಆಧಾರ್ ಹಾಗೂ ಮೊಬೈಲ್ ಸಂಖ್ಯೆ ಲಿಂಕ್ ಮಾಡುವ ಮೂಲಕ ಸಂಪೂರ್ಣ ವಿವರ ಲಭ್ಯವಾಗಲಿದೆ.
ಜಿಲ್ಲೆಯಾದ್ಯಂತ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಹಾಲು ಒಕ್ಕೂಟಗಳ ಆಡಳಿತ ವರ್ಗದ ಸಹಕಾರದಿಂದ ಜಿಲ್ಲೆಯಲ್ಲಿ ಯೋಜನೆ ಯಶಸ್ವಿಯಾಗಿದೆ. ಶೇ.97.99 ಯುಐಡಿ ಟ್ಯಾಗ್ ಅಳವಡಿಸುವ ಮೂಲಕ ಜಾನುವಾರುಗಳ ಸಂಪೂರ್ಣ ದಾಖಲೀಕರಣ ಲಭ್ಯವಾಗಲಿದೆ. –ಡಾ| ಪ್ರಸನ್ನ ಕುಮಾರ್, ಉಪನಿರ್ದೇಶಕರು, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಇಲಾಖೆ (ಆಡಳಿತ) ದ.ಕ.
– ಚೈತ್ರೇಶ್ ಇಳಂತಿಲ