Advertisement

ಜಾನುವಾರು ಮಾಂಸ ಸಾಗಾಟ: ಇಬ್ಬರು ಆರೋಪಿಗಳ ಬಂಧನ

08:00 AM Jul 31, 2017 | Team Udayavani |

ಉಪ್ಪಿನಂಗಡಿ: ಅಕ್ರಮವಾಗಿ ಜಾನುವಾರು ಮಾಂಸ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ರವಿವಾರ ಪತ್ತೆಹಚ್ಚಿದ ಉಪ್ಪಿನಂಗಡಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ತಣ್ಣೀರುಪಂಥ ನಿವಾಸಿಗಳಾದ ಬಶೀರ್‌ (32) ಹಾಗೂ ಜೈನುದ್ದೀನ್‌ (28) ಬಂಧಿತ ಆರೋಪಿಗಳು. ರವಿವಾರ ಬೆಳಗ್ಗೆ 6ರ ಸುಮಾರಿಗೆ ಇಳಂತಿಲ ಕ್ರಾಸ್‌ ಬಳಿ ಮಾರುತಿ ಆಮ್ನಿಯೊಂದನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ 
ಅದರಲ್ಲಿ 300 ಕೆ.ಜಿ. ಜಾನುವಾರು ಮಾಂಸ ಪತ್ತೆಯಾಗಿದೆ. ಕಾರು ಹಾಗೂ ಜಾನುವಾರು ಮಾಂಸವನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಆರೋಪಿ ಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ದನದ ಮಾಂಸ ಹಾಗೂ ಆಮ್ನಿಯ ಬೆಲೆ ಸುಮಾರು 2.45 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಆರೋಪಿಗಳು ಈ ಮಾಂಸವನ್ನು ಕುಪ್ಪೆಟ್ಟಿಯಿಂದ ದೇರಳಕಟ್ಟೆಗೆ ಕೊಂಡೊಯ್ಯುತ್ತಿದ್ದರೆನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next