Advertisement

Live-in ಗೆಳತಿ ಸರಸ್ವತಿ ವೈದ್ಯ ಹತ್ಯೆ ಪ್ರಕರಣ: ಆರೋಪಿಗೆ ಅಶ್ಲೀಲ ಚಿತ್ರ ವೀಕ್ಷಣೆ ಹುಚ್ಚು!

08:14 PM Jun 10, 2023 | Team Udayavani |

ಥಾಣೆ: ತನ್ನ 32 ವರ್ಷದ ಲಿವ್‌ ಇನ್‌ ಗೆಳತಿ ಸರಸ್ವತಿ ವೈದ್ಯ ಅವರನ್ನು ಹತ್ಯೆ ಮಾಡಿ, ಕತ್ತರಿಸಿ, ಕುಕ್ಕರ್‌ನಲ್ಲಿ ಬೇಯಿಸಿ, ಬೀದಿ ನಾಯಿಗಳಿಗೆ ಹಂಚಿದ್ದ ಆರೋಪಿ ಮನೋಜ್‌ ರಮೇಶ್‌ ಸಾಣೆಗೆ ಅಶ್ಲೀಲ ಚಿತ್ರ (ಪೋರ್ನೋಗ್ರಫಿ) ವೀಕ್ಷಣೆಯ ಹುಚ್ಚು ಇತ್ತು ಎಂಬುದು ಪೊಲೀಸರ ವಿಚಾರಣೆಯಿಂದ ಬಹಿರಂಗವಾಗಿದೆ.

Advertisement

ಮನೋಜ್‌(56)ಗೆ ಸ್ವಲ್ಪ ಮರೆವಿತ್ತು, ಹಾಗಾಗಿ ಪೋರ್ನ್ ಸೈಟ್‌ಗಳ ಹೆಸರನ್ನು ಪೇಪರ್‌ನಲ್ಲಿ ಬರೆದಿಡುತ್ತಿದ್ದ. ಇದು ಕೂಡ ಪೊಲೀಸರಿಗೆ ದೊರೆತಿದೆ. ತನ್ನನ್ನು ಖುಷಿಯಾಗಿ ಮತ್ತು ತೃಪ್ತಿಯಾಗಿ ಇಡಲು ಸಾಧ್ಯವಾಗದ ಬಗ್ಗೆ ಮನೋಜ್‌ನೊಂದಿಗೆ ಸರಸ್ವತಿ ಜಗಳವಾಡುತ್ತಿದ್ದಳು. ಅಲ್ಲದೇ ಆತ ಮೊಬೈಲ್‌ನಲ್ಲಿ ಬೇರೆ ಮಹಿಳೆಯರ ನಗ್ನ ದೇಹಗಳನ್ನು ವೀಕ್ಷಿಸುವುದರ ಕುರಿತು ಸರಸ್ವತಿ ಕೆರಳುತ್ತಿದ್ದಳು ಎಂಬುದು ತಿಳಿದುಬಂದಿದೆ.

ಪೊಲೀಸರು ಆರೋಪಿ ಮನೋಜ್‌ನ ಮೊಬೈಲ್‌ ವಶಕ್ಕೆ ಪಡೆದು, ಆತನ ಬ್ರೌಸಿಂಗ್‌ ಹಿಸ್ಟರಿಯನ್ನು ಪರಿಶೀಲಿಸಿದ್ದಾರೆ. ಹತ್ತಾರು ಪೋರ್ನ್ ಸೈಟ್‌ಗಳನ್ನು ಆತ ವೀಕ್ಷಿಸುತ್ತಿದ್ದುದು ಕಂಡುಬಂದಿದೆ. ಪ್ರಮುಖವಾಗಿ, ಹತ್ಯೆಯಾದ ಜೂ.4ರಂದು ಆತ ಮೃತದೇಹ ಕೆಡದಂತೆ ಇಡುವ ಬಗ್ಗೆ ಗೂಗಲ್‌ನಲ್ಲಿ ಸರ್ಚ್‌ ಮಾಡಿದ್ದಾನೆ. ಜತೆಗೆ ಮಾರುಕಟ್ಟೆಯಿಂದ ನಾಲ್ಕು ನೀಲಗಿರಿ ತೈಲ ಬಾಟಲಿ ಖರೀದಿಸಿ, ದುರ್ವಾಸನೆ ಹಬ್ಬದಂತೆ ಮೃತದೇಹದ ಮೇಲೆ ಹಾಕಿದ್ದಾನೆ.

ಮೃತದೇಹವನ್ನು ಮರ ಕತ್ತರಿಸುವ ಸಾಧನದಿಂದ ತುಂಡು ತುಂಡಾಗಿ ಕತ್ತರಿಸಿದ್ದಾನೆ. ಅವುಗಳು ಕೆಡದಂತೆ ಇಡಲು ಕುಕ್ಕರ್‌ನಲ್ಲಿಟ್ಟು ಬೇಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹ ಪೂರ್ಣವಾಗಿ ವಿಲೇವಾರಿಯಾಗುವ ಮುನ್ನವೇ ನೆರೆಮನೆಯವರಿಗೆ ದುರ್ವಾಸನೆ ಬಡಿದು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ, ಕೊಲೆ ಬಹಿರಂಗವಾಗಿದೆ.

ನೆರೆ-ಹೊರೆಯವರು ಶಾಕ್‌:
ಆರೋಪಿ ತನ್ನ ಸಹ ಜೀವನದ ಗೆಳತಿಯನ್ನು ಹತ್ಯೆ ಮಾಡಿ, ತುಂಡಾಗಿ ಕತ್ತರಿಸಿ, ಅವುಗಳನ್ನು ಬಟ್ಟಲು ಮತ್ತು ಬಕೆಟ್‌ಗಳಲ್ಲಿ ಇಟ್ಟ ಸುದ್ದಿ ಕೇಳಿ, ಅದೇ ಕಟ್ಟಡದಲ್ಲಿ ವಾಸವಿರುವ ನೆರೆ-ಹೊರೆಯವರು ಬೆಚ್ಚಿಬಿದ್ದಿದ್ದಾರೆ. ತಮ್ಮ ಮನೆಯ ಪಕ್ಕದಲ್ಲೇ ಇಂತಹದೊಂದು ಕ್ರೌರ್ಯ ನಡೆಯಿತೇ ಎಂಬುದನ್ನು ಈಗಲೂ ಅವರಿಗೆ ನಂಬಲು ಆಗುತ್ತಿಲ್ಲ. ಅಪಾರ್ಟ್‌ಮೆಂಟ್‌ನಲ್ಲಿ ಮೌನ ಆವರಿಸಿದ್ದು, ಎಲ್ಲರೂ ಸೇರಿ ಅಪಾರ್ಟ್‌ಮೆಂಟ್‌ ಆವರಣವನ್ನು ಸ್ವತ್ಛಗೊಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next