Advertisement

19ಕ್ಕೆ ದೆಹಲಿಯಿಂದಲೇ ಕೈ ಪಟ್ಟಿ ಬಿಡುಗಡೆ: ಈಶ್ವರ ಖಂಡ್ರೆ

01:19 AM Mar 17, 2019 | Team Udayavani |

 ಕಲಬುರಗಿ: ಕೋಮುವಾದಿ, ಜಾತಿವಾದಿ ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ಲೋಕಸಭೆ ಚುನಾವಣೆಯನ್ನು ಕಾಂಗ್ರೆಸ್‌ ಸವಾಲಾಗಿ ಸ್ವೀಕರಿಸಿದ್ದು, ಮಾ.19ರಂದು ರಾಜ್ಯದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೆಹಲಿಯಲ್ಲಿ 19ರಂದು ಕಾಂಗ್ರೆಸ್‌ ಕೇಂದ್ರೀಯ ಸಮಿತಿ ಸಭೆ ನಡೆಯಲಿದೆ.

Advertisement

ಅಂದು ದೆಹಲಿಯಿಂದಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ರಾಹುಲ್‌ ಗಾಂಧಿಗೆ ಉತ್ತರ ಕರ್ನಾಟಕ ಅಥವಾ ಹೈದ್ರಾಬಾದ್‌ ಕರ್ನಾಟಕದಿಂದ ಸ್ಪರ್ಧಿಸುವಂತೆ ರಾಜ್ಯದ ಎಲ್ಲ ನಾಯಕರು ಮನವಿ ಮಾಡಿದ್ದೇವೆ. ಬೀದರ್‌ ಕ್ಷೇತ್ರದಿಂದ ಸ್ಪರ್ಧಿಸಿ ಎಂದು ನಾನು ಕೂಡ ಆಹ್ವಾನ ನೀಡಿದ್ದೇನೆ’ ಎಂದರು. ಮೈತ್ರಿ ಪಕ್ಷಗಳಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇರುತ್ತವೆ. ಮೈತ್ರಿ ಧರ್ಮ ಪಾಲನೆ
ಮತ್ತು ವಿಶಾಲ ದೃಷ್ಟಿಕೋನದಿಂದ ತುಮಕೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಲಾಗಿದೆ. ಆದರೂ, ತುಮಕೂರು ಕ್ಷೇತ್ರ ಮತ್ತೆ ಕಾಂಗ್ರೆಸ್‌ಗೆಸಿಗುವ ಅವಕಾಶವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next