Advertisement

ಲಿಂಗಾಯತ ಪ್ರತ್ಯೇಕ ಧರ್ಮ ಚುನಾವಣಾ ವಿಷಯವಲ್ಲ

06:45 AM May 07, 2018 | |

ಬೆಂಗಳೂರು: ಚುನಾವಣೆ ಪ್ರಕ್ರಿಯೆಗೆ ಮುಂಚೆ ಸಾಕಷ್ಟು ವಾದ-ವಿವಾದಕ್ಕೆ ಕಾರಣವಾದ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಚುನಾವಣೆಯ ವಿಷಯವೇ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಪತ್ರಿಕಾ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವನ್ನು ನಾವು ಹುಟ್ಟುಹಾಕಿದ್ದು ಅಲ್ಲ. ಮಠಾಧೀಶರು, ಸಂಘಟನೆಗಳ ಮನವಿ ಮೇರೆಗೆ ಶಿಫಾರಸು ಮಾಡಲಾಗಿದೆ. ಆದರೆ, ಅದು ಚುನಾವಣೆ ವಿಷಯವಲ್ಲ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಹ ಇದಕ್ಕೆ ಪ್ರತಿಕ್ರಿಯಿಸಿ, ನಮಗೂ ಅದು ಚುನಾವಣೆ ವಿಷಯವಲ್ಲ.ಲಿಂಗಾಯತ-ವೀರಶೈವ ಎರಡೂ ಒಂದೇ. ಆದರೆ, ಸಿದ್ದರಾಮಯ್ಯ ಅವರು ಜಾತಿಯ ವಿಷ ಬೀಜ ಬಿತ್ತುವ ಕೆಲಸ ಮಾಡಿದರು ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next